ಸುರೇಖಾ ಹೆಗಡೆ ಯವರ ಸಂಗೀತ್ ಸಮರ್ಪಣ್ (ರಿ) ಅರ್ಪಿಸುವ ಸಂಗೀತ ಸ್ವರಧಾರಾ (ಆವೃತ್ತಿ -೨) ರ ಎಂದು ಮರೆಯದ ಹಳೆಯ ಸುಮಧುರ ಹಿಂದಿ ಮತ್ತು ಕನ್ನಡ ಚಲನಚಿತ್ರ ಹಾಡುಗಳ ಗೀತ ಗಾಯನವನ್ನು ಮಾರ್ಚ 2ರಂದು ಶನಿವಾರ ಸಂಜೆ 6 ಗಂಟೆಗೆ ನಗರದ ಕುವೆಂಪು ರಂಗಮಂದಿರ ಉಚಿತ ಪ್ರವೇಶದೊಂದಿಗೆ ಏರ್ಪಡಿಸಲಾಗಿದೆ.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ರವರು ಮತ್ತು ಶಿವಮೊಗ್ಗ ಜಿಲ್ಲೆಯ ಶಾಸಕರಾದ ಚನ್ನಬಸಪ್ಪ ರವರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಮೇಲ್ವಿನ್ ಲೀಮಾ ಬಸವರಾಜ ರಾಣಿಬೆನ್ನೂರು, ರಾಮ್ ರಾವ್ ರಂಗದೊಳ್ ಬೆಂಗಳೂರು ಹ್ಯಾರಿಸ್ ವಿಠ್ಠಲ್ ರಂಗದೊಳ್ ನಂದೀಶ್ ಹೊಸಪೇಟೆ ಸಮನ್ವಯ ಕಾಶಿ ಶಶಿಕಿರಣ್ ಮುಂತಾದವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮವು ನಗರದ ಕುವೆಂಪುರ ರಂಗ ಮಂದಿರದಲ್ಲಿ ಇದೆ 2ರಂದು ಶನಿವಾರ ಸಂಜೆ 6 ಗಂಟೆಗೆ ಉಚಿತವಾಗಿ ಪ್ರವೇಶವಿರುತ್ತದೆ.

ಶಿವಮೊಗ್ಗದ ನಾಗರಿಕರು ಕುಟುಂಬ ಸಮೇತರಾಗಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಅಧ್ಯಕ್ಷರು ಸಂಗೀತ್ ಸಮರ್ಪಣ್ ಟ್ರಸ್ಟ್ ನ ಸುರೇಖಾ ಹೆಗಡೆಯವರು ತಿಳಿಸಿದ್ದಾರೆ.


ವರದಿ: ಸಂತೋಷ್ ರಾಮ್