ಕಾಂಗ್ರೆಸ್ ನೂತನ ಜಿಲ್ಲಾ ಅಧ್ಯಕ್ಷರಾಗಿ ಆರ್ ಪ್ರಸನ್ನ ಕುಮಾರ್ ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಆರ್.ಪ್ರಸನ್ನ ಕುಮಾರ್,ಈ ಸಲ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಕಾರ್ಯಕರ್ತರು ಮುಖಂಡರುಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು. ಈ ಸಮಯದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯಾವರಿಗೆ ನನ್ನನ್ನ ಅಧ್ಯಕ್ಷರನ್ನಾಗಿ ನೇಮಿಸಿದ್ದಕ್ಕೆ ಧನ್ಯವಾಗಳು ತಿಳಿಸಿದರು.

ಎಲ್ಲರೂ ಒಟ್ಟಿಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡೋಣ. ಜನರಿಗೆ ಸುಳ್ಳು ಬಿಜೆಪಿಯ ನೂನ್ಯತೆಯ ಬಗ್ಗೆ ಜನರಿಗೆ ಅರ್ಥೈಸಬೇಕಿದೆ. ಪೆಟ್ರೋಲ್ ದರ ನ ನೂರರ‌ಗಡಿ ದಾಟಿದೆ‌ ಆದರೆ ಇದು ಜನರಿಗೆ ಅರ್ಥ ಆಗ್ತಿಲ್ಲ ಅರ್ಥ ಆಗುವಂತೆ ಜನರಿಗೆ ತಿಳಿಸಬೇಕು ಎಂದರು.

ವರದಿ ಪ್ರಜಾ ಶಕ್ತಿ