2238 ಬೂತ್ ಗಳಲ್ಲಿ ನಾವು ಬೂತ್ ಕಮಿಟಿ ಮಾಡಿಕೊಂಡಿದ್ದೇವೆ ಯಾವ ರಾಷ್ಟ್ರೀಯ ಪಕ್ಷಗಳಿಂದ ಇಷ್ಟು ಬೂತ್ ಕಮಿಟಿಗಳು ಆಗಿಲ್ಲ ರಾಷ್ಟ್ರ ಭಕ್ತರ ಬಳಗದ ವತಿಯಿಂದ ಈ ಕಾರ್ಯ ಆಗಿದೆ ಬಳಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬೈಂದೂರಿನಲ್ಲಿ ತಿಳಿಸಿದರು.

ನನ್ನ ಗುರುತು ಕಬ್ಬಿನ ಜೊತೆ ಇರುವ ರೈತ ನನ್ನ ಕ್ರಮ ಸಂಖ್ಯೆ 8 ಎಂದು ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನ ಸಾಮಾನ್ಯರಿಗೆ ಹೇಳುತ್ತಿದ್ದಾರೆ ಈಗಾಗಲೇ ಜನರಿಗೆ ನನ್ನ ಚಿಹ್ನೆ ಹಾಗು ನನ್ನ ಗುರುತಿನ ಪರಿಚಯ ಆಗಿದೆ.

ಯಡಿಯೂರಪ್ಪ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಗೀತಾ ಶಿವರಾಜ್ ಕುಮಾರ್ ರವರನ್ನು ಹಾಕಿಸಿಕೊಂಡು ಬಂದಿದ್ದಾರೆ ಇದರಿಂದ ಅಸಮಾಧಾನ ಪಟ್ಟ ಕಾಂಗ್ರೆಸ್ಸಿಗರು ನನಗೆ ಕರೆ ಮಾಡಿ ರಾಘವೇಂದ್ರಗೆ ವೋಟ್ ಕೊಡಲು ಆಗುವುದಿಲ್ಲ ಗೀತಾ ಶಿವರಾಜ್ ಕುಮಾರ್ ರವರಿಗೆ ಮತ ಹಾಕಲು ಮನಸ್ಸಿಲ್ಲ ಈ ಬಾರಿ ಕೆ.ಎಸ್. ಈಶ್ವರಪ್ಪ ಗೆ ಮತ ಹಾಕುವುದಾಗಿ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಸಮಾವೇಶಕ್ಕೆ ಸಾವಿರಾರು ಜನ ಸ್ವಯಂ ಪ್ರೇರಿತರಾಗಿ ಆಗಮಿಸಿದ್ದರು ನಾನು ಇಷ್ಟು ಜನರ ನಿರೀಕ್ಷೆ ಮಾಡಿರಲಿಲ್ಲ ಸಾರ್ವಜನಿಕರ ಬೆಂಬಲದಿಂದ ಸಂತೋಷವಾಗಿದೆ.

ಶ್ರೀಧರ್ ಬಿಜ್ಜೂರು ಬಿಜೆಪಿ ಸೇರ್ಪಡೆ


ಶ್ರೀಧರ್ ಬಿಜ್ಜೂರು ನನ್ನ ಬಳಿ ನಿಜವಾದ ಕಾರಣ ಹೇಳಿ ಹೋಗಿಲ್ಲ ಅವರು ಹೋಗಿರುವ ಬಗ್ಗೆ ನಮಗೆ ಬೇಸರ ಇದೆ ಆದರೆ ಇಂದಿನ ಸಮಾವೇಶದಲ್ಲಿ ಇಷ್ಟು ಜನ ಸೇರಲು ಅವರು ಕಾರಣ. ನನ್ನ ಜೊತೆ ಅವರೂ ಬಹಳಷ್ಟು ಕೆಲಸ ಮಾಡಿದ್ದಾರೆ ಈಗ ಅವರು ಬಿಜೆಯಲ್ಲಿದ್ದರೂ ಚುನಾವಣೆಯಲ್ಲಿ ಕೆ.ಎಸ್.ಈಶ್ವರಪ್ಪ ಗೆಲ್ಲಲಿ ಎಂಬುದು ಅವರ ಆಸೆಯಾಗಿದೆ ಕಾರಣ ಹಿಂದುತ್ವದ ಬಗ್ಗೆ ನನ್ನ ಬಳಿ ಬಹಳಷ್ಟು ಚರ್ಚೆ ಮಾಡಿದ್ದಾರೆ ರಾಜ್ಯದಲ್ಲಿ ಹಿಂದುತ್ವದ ಉಳಿಸಲು ಸಾಧ್ಯವಾಗುವುದು ಈಶ್ವರಪ್ಪ ರವರಿಂದ ಮಾತ್ರ ಸಾಧ್ಯ ಎಂದು ಅವರಿಗೆ ಗೊತ್ತಿದೆ.

ಪೆನ್ ಡ್ರೈವ್ ಪ್ರಕರಣ ಒಂದು ದರಿದ್ರ ವಿಷಯ ಅಂತಹ ವಿಷಯದ ಬಗ್ಗೆ ಮಾತನಾಡಿದ್ರೆ ನಮ್ಮ ಬಾಯಲ್ಲಿ ಹುಳ ಬೀಳುತ್ತೆ ಸ್ತ್ರೀಯರನ್ನು ನಾವು ಸೀತೆ ಸಾವಿತ್ರಿಯರಂತೆ ಪೂಜ್ಯ ಭಾವನೆಯಿಂದ ನೋಡುತ್ತೇವೆ.
ದೇಶದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುತ್ತೇವೆ. ದುಶ್ಯಾಸನ ಸ್ತ್ರೀಗೆ ಅವಮಾನ ಮಾಡುವ ಪ್ರಯತ್ನ ಮಾಡಿದಾಗ ಶಿಕ್ಷೆಯಾಗಿದ್ದು ದುಶ್ಯಾಸನನಿಗೆ. ಮಹಿಳೆಯರಿಗೆ ಅವಮಾನ ಮಾಡುವ ದುಶ್ಯಾಸನ ಮಾನಸಿಕತೆ ಇರುವಂತವರಿಗೆ ಇಡೀ ದೇಶ ಪ್ರಪಂಚವೇ ಚೀ ಥೂ ಎನ್ನುತ್ತಿದೆ ಮಹಿಳೆಯರನ್ನು ದುರುಪಯೋಗ ಮಾಡಿಕೊಂಡದ್ದು ತಪ್ಪು ಅಂತವರಿಗೆ ಖಂಡಿತ ಸರಿಯಾದ ಶಿಕ್ಷೆ ಆಗಲಿದೆ.

ಕಾಂತೇಶ್ ಕೋರ್ಟ್ ನಿಂದ ಸ್ಟೇ ತಂದಿರುವ ಬಗ್ಗೆ
ಈಗ ಚುನಾವಣಾ ಸಮಯ ಇಂತಹ ಸಮಯದಲ್ಲಿ ನಮ್ಮ ಬಗ್ಗೆ ಅಪಮಾನ ಮಾಡಲು ಕುತಂತ್ರ ರಾಜಕಾರಣ ನಡೆಸುವ ಸಾಧ್ಯತೆ ಇದೆ ಆದ್ದರಿಂದ ಕೋರ್ಟ್ ನಿಂದ ಸ್ಟೇ ತರಲಾಗಿದೆ ಕುತಂತ್ರ ರಾಜಕಾರಣಕ್ಕೆ ಹೇಗೆ ಉತ್ತರ ಕೊಡಬೇಕೆಂದು ನಮಗೆ ಗೊತ್ತಿದೆ.

ಇಲ್ಲಿಯವರೆಗೂ ಇದ್ದ ಸಂಸದರು ಇಲ್ಲಿನ ಮೀನುಗಾರರ ಸಮಸ್ಯೆ ಬಗೆ ಹರಿಸುವಲ್ಲಿ ವಿಫಲರಾಗಿದ್ದಾರೆ ಆದ್ದರಿಂದ ಮೀನುಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನನಗೆ ಬೆಂಬಲ ನೀಡಿದ್ದಾರೆ ಚುನಾವಣೆಯಲ್ಲಿ ಗೆದ್ದ ನಂತರ ಮೀನುಗಾರರ ಸಮಸ್ಯೆ ಬಗೆ ಹರಿಸಿ ಅವರ ಋಣ ತೀರಿಸುತ್ತೇನೆ.

ಕೇಂದ್ರ ಸರ್ಕಾರ ಪ್ರವಾಸೋಧ್ಯಮಕ್ಕೆ ಸಾಕಷ್ಟು ಹಣ ಬಿಡುಗಡೆ ಮಾಡಿದೆ ಅದರಲ್ಲೂ ಕರಾವಳಿ ಭಾಗದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿ ಮಾಡಲು ಹೆಚ್ಚಿನ ಒತ್ತು ಕೊಟ್ಟಿದೆ ಆದರೆ ಇಲ್ಲಿಯವರೆಗೂ ಇದ್ದ ಸಂಸದರು ಇಲ್ಲಿ ಪ್ರವಾಸೋಧ್ಯಮದ ಬಗ್ಗೆ ಗಮನ ಹರಿಸಿಲ್ಲ ನಾನು ಸಂಸದನಾದ ನಂತರ ಈ ಕ್ಷೇತ್ರಕ್ಕೆ ಕೇಂದ್ರ ಸಂಬಂಧ ಪಟ್ಟ ಸಚಿವರು ಹಾಗು ಅಧಿಕಾರಿಗಳನ್ನು ಕರೆದುಕೊಂಡು ಬಂದು ಪ್ರವಾಸೋಧ್ಯಮ ಅಭಿವೃದ್ಧಿಗೆ ಒತ್ತು ನೀಡಲಿದ್ದೇನೆ.

ವರದಿ ಪ್ರಜಾ ಶಕ್ತಿ