ಶ್ರೀಮತಿ ಭಾರತಿ, ಪಿಎಸ್ಐ, ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆರವರು ಶಿವಮೊಗ್ಗ ನಗರದ ಕುವೆಂಪು ರಸ್ತೆ, ಹೆಲಿಪ್ಯಾಡ್ ವೃತ್ತ, ಆದಿಚುಂಚನಗಿರಿ ಕ್ರಾಸ್, ನಂದಿ ಪೆಟ್ರೋಲ್ ಬಂಕ್ ಹತ್ತಿರ ಶಾಲಾ ವಾಹನಗಳ ತಪಾಸಣೆ ನಡೆಸಿ, ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳಾದ ಆರ್.ಸಿ (ನೋಂದಣಿ ಪ್ರಮಾಣ ಪತ್ರ), ಚಾಲ್ತಿಯಲ್ಲಿರುವ ವಿಮಾ ಪತ್ರ, ಇತ್ತೀಚಿನ ಎಮಿಷನ್ ಟೆಸ್ಟ್ ಪ್ರಮಾಣ ಪತ್ರ, ಚಾಲಕರಿಗೆ ಸಂಬಂದಿಸಿದ ದಾಖಲಾತಿಗಳಾದ ಡಿ.ಎಲ್ (ಚಾಲನಾ ಪರವಾನಿಗೆ), ಬ್ಯಾಡ್ಜ್ ಹಾಗೂ ಇತರ ದಾಖಲಾತಿಗಳನ್ನು ನಡೆಸಿದ್ದು, ಅಪಘಾತದ ಸಂದರ್ಭದಲ್ಲಿ ತುರ್ತು ಉಪಯೋಗಕ್ಕಾಗಿ ವಾಹನದಲ್ಲಿ ಪ್ರಥಮಾ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಲಾಯಿತು.

ನಂತರ ಶಾಲಾ ವಾಹನಗಳ ಚಾಲಕರುಗಳಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮಾಹಿತಿ ನೀಡಿ, ಮಳೆಗಾಲವಾಗಿರುವುದರಿಂದ ರಸ್ತೆಯ ತಿರುವುಗಳಲ್ಲಿ ವಾಹನಗಳನ್ನು ಅತಿವೇಗ ಹಾಗೂ ಅಜಾಗರೂಕತೆಯೀಂದ ವಾಹನ ಚಾಲನೆ ಮಾಡದೇ ವೇಗದ ಮಿತಿಯಲ್ಲಿಯೇ ವಾಹನಗಳನ್ನು ಚಾಲನೆ ಮಾಡುವಂತೆ, ಮಧ್ಯಪಾನ ಮಾಡಿ / ಯಾವುದೇ ನಶೆಯಲ್ಲಿ ವಾಹನ ಚಾಲನೆ ಮಾಡದಂತೆ ಮತ್ತು ಪ್ಯಾಸೆಂಜರ್ ಓವರ್ ಲೋಡ್ ಮಾಡದೇ ಕಡ್ಡಾಯವಾಗಿ ವಾಹನದಲ್ಲಿ ನಿಗದೀ ಪಡಿಸಿದ ಆಸನಗಳಷ್ಟೇ ಮಕ್ಕಳನ್ನು ಮಾತ್ರ ಕೂರಿಸಿಕೊಂಡು ಹೋಗುವಂತೆ ಸೂಚನೆಗಳನ್ನು ನೀಡಲಾಗಿರುತ್ತದೆ.

ವರದಿ ಪ್ರಜಾ ಶಕ್ತಿ