ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಬಳಿ ದಿನಾಂಕ 21-01-2021 ರ ರಾತ್ರಿ 10.20 ರ ಸುಮಾರಿಗೆ ಕಲ್ಲು ಕ್ವಾರಿಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜಿಲೆಟಿನ್ ಕಡ್ಡಿಗಳು ಮತ್ತು ಸಿಡಿಮದ್ದುಗಳು ಸ್ಫೋಟಗೊಂಡು ಶಿವಮೊಗ್ಗ ಜಿಲ್ಲಾದ್ಯಂತ ಭೂಕಂಪನ ಉಂಟಾಗಿ ಜಲ್ಲಿ ಕ್ರಷರ್ ಮತ್ತು ಕಲ್ಲು ಕ್ವಾರಿಗಳ ಸಮೀಪದಲ್ಲೇ ಇರುವ ಹುಣಸೋಡು, ಹೊಸೂರು ಅಬ್ಬಲಗೆರೆ ಬೊಮ್ಮನಕಟ್ಟೆ ಬಸವ ಗಂಗೂರು ಗೆಜ್ಜೇನಹಳ್ಳಿ ಹನುಮಂತನಗರ ಚನ್ನ ಮುಂಬಾಪುರ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು.ಕೆಲ ಮನೆಗಳ ಛಾವಣಿ ಹಾಳಾಗಿದ್ದು ಮತ್ತೆ ಕೆಲವು ಮನೆಗಳ ಟಿವಿ ಎಲೆಕ್ಟ್ರಾನಿಕ್ ಉಪಕರಣಗಳು ಸ್ಫೋಟದಿಂದ ಹಾನಿಗೊಳಗಾಗಿದ್ದು ಜಿಲ್ಲಾಡಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ಲಕ್ಷ್ಯದಿಂದ ತಮ್ಮದಲ್ಲದ ತಪ್ಪಿನಿಂದ ನೂರಾರು ಗ್ರಾಮಸ್ಥರು ಲಕ್ಷಾಂತರ ರುಪಾಯಿಗಳ ನಷ್ಟ ಅನುಭವಿಸುವಂತಾಗಿದ್ದು ಸುಮಾರು 850 ಸಂತ್ರಸ್ತರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದು ಮಳೆ ಬರುವ ಮುಂಚೆ ಪರಿಹಾರ ನೀಡಲು ಕೋರಿ ನವ ಕರ್ನಾಟಕ ನಿರ್ಮಾಣ ವೇದಿಕೆ ನೇತತ್ವದಲ್ಲಿ ಸಂತ್ರಸ್ತರು ಪ್ರತಿಭಟನೆಯನ್ನು ಧರಣಿಯನ್ನು ನಡೆಸಿದ್ದು ಅಧಿಕಾರಿಗಳು ತಜ್ಞರೊಡನೆ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದರು. ಆದರೆ ಹಾನಿಗೊಳಗಾದ ಕೆಲ ಮನೆಗಳಿಗೆ ಮಾತ್ರ ಭೇಟಿ ನೀಡಿ ತಮ್ಮ ಕಚೇರಿಯಲ್ಲಿ ಕುಳಿತು ಸ್ಫೋಟದಿಂದ ಮನೆಗಳಿಗೆ ಸ್ವಲ್ಪ ಪ್ರಮಾಣದ ಬಿರುಕು ಹೊಂದಿರುವುದಾಗಿ ವರದಿ ನೀಡಿದ್ದು ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಥಳ ಪರಿಶೀಲನೆ ನಡೆಸದೆ ಕಚೇರಿಯಲ್ಲೇ ಕುಳಿತು ಶೇ. 10 ರಷ್ಟು ಹಾನಿಯಾಗಿರುವುದಾಗಿ ವರದಿಯನ್ನು ನೀಡಿದರು ಸ್ಫೋಟದ ವಿಷಯದಲ್ಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸುವ ವರೆಗೂ ಪರಿಹಾರ ಇಂದು ನಾಳೆ ಎಂದು ಆಲಿಸಿ ಸಂತ್ರಸ್ತರನ್ನು ಸಮಾಧಾನಪಡಿಸಲು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ನಂತರ ತಮಗೂ ಹಾನಿಗೊಳಗಾದ ಮನೆಗಳಿಗೆ ಸಂಬಂಧವಿರುವುದಿಲ್ಲ ಪರಿಹಾರದ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಸಂತ್ರಸ್ತರ ಪೈಕಿ ಕೆಲವರು ಸಾಲ ಮಾಡಿ ತಮ್ಮ ಮನೆಗಳನ್ನು ಅಲ್ಪಸ್ವಲ್ಪ ರಿಪೇರಿ ಮಾಡಿಸಿಕೊಂಡಿದ್ದು ಹಣವಿಲ್ಲದ ಕಾರಣ ಸಂಕಷ್ಟದಿಂದ ಸಾಲವು ದೊರೆಯದ ಕೆಲ ಸಂತ್ರಸ್ತರು ಜಿಲ್ಲಾಡಳಿತದ ಸಹಾಯ ಕಾಯುತ್ತ ಕುಳಿತಿದ್ದ ಕಳೆದ ವಾರ ಸುರಿದ ಮಳೆಯಿಂದಾಗಿ ಸ್ಫೋಟದಿಂದ ಬಿರುಕುಬಿಟ್ಟಿದ್ದ ಬೊಮ್ಮನಕಟ್ಟೆಯ ಕುಮಾರ್ ಮತ್ತಿತರರ ಮನೆಗಳು ಸಂಪೂರ್ಣ ನೆಲಸಮವಾಗಿತ್ತು ಇನ್ನೂ ಹಲವು ಮನೆಗಳು ಬೀಳುವ ಹಂತದಲ್ಲಿದೆ. ಆದ್ದರಿಂದ ಜಿಲ್ಲಾಡಳಿತದ ಬೇಜವಾಬ್ದಾರಿತನದಿಂದ ಸ್ಫೋಟ ಹಾಗೂ ಮಳೆಯಿಂದ ಹಾನಿಗೊಳಗಾಗಿರುವ ಪತ್ತೇರ ಸಮವಾಗಿರುವ ಮನೆಗಳಿಗೆ 5ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂದು ನವ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹಿಸುತ್ತಿದ್ದು , ಒಂದು ವೇಳೆ ಶೀಘ್ರವಾಗಿ ಪರಿಹಾರ ನೀಡದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153