ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ ಇಲ್ಲಿ ದಿನಾಂಕ: ೧೨.೦೮.೨೦೨೪ ರಿಂದ ೧೪.೦೮.೨೦೨೪ ರವರೆಗೆ ತೋಟಗಾರಿಕೆ ಬೆಳೆಗಳ ನರ್ಸರಿ ನಿರ್ವಹಣೆ ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಆಸಕ್ತಿಯುಳ್ಳ ೧೮ ರಿಂದ ೩೫ ವರ್ಷದ ಯುವಕ, ಯುವತಿಯರು/ರೈತರು ಭಾಗವಹಿಸಬಹುದು.


ತರಬೇತಿ ವೇಳೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಮೊದಲು ನೋಂದಾಯಿಸಿದ ೨೫ ಅರ್ಹ ಅಭ್ಯರ್ಥಿಗಳಿಗೆ ಅವಕಾಶವಿದ್ದು, ತರಬೇತಿ ಕಾರ್ಯಕ್ರಮಕ್ಕೆ ರೈತ ಬಾಂಧವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ ತರತಕ್ಕದ್ದು.
ಆಸಕ್ತ ರೈತರು ಡಾ. ಭರತ್ ಕುಮಾರ್ ಎಂ. ವಿ., ವಿಜ್ಞಾನಿ (ತೋಟಗಾರಿಕೆÀ), ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗ, ಮೊಬೈಲ್ ಸಂಖ್ಯೆ: ೮೨೭೭೨೦೬೫೪೯ ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವರದಿ ಪ್ರಜಾ ಶಕ್ತಿ