ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯಲ್ಲಿರುವ ಗಂಗಾ ಪ್ರಿಯಾ ಸಭಾಂಗಣದಲ್ಲಿ  3 ನೇ ಸುತ್ತಿನ ಅನ್ನದಾಸೋಹ ಕಾರ್ಯಕ್ರಮದ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಈ ಸಮಯದಲ್ಲಿ ಹಲವಾರು ಸದಸ್ಯರು ಸೇರಿ ಸಲಹೆ ಮತ್ತು ದೇಣಿಗೆ ನೀಡುವ ಮೂಲಕ ಸಭೆಯಲ್ಲಿ ಸಹಕಾರ ನೀಡಿದರು.

ವಿಷೇಶವಾಗಿ ಚೆನೈ ನಿಂದ ಬಂದಂತಹ ಇಬ್ಬರು ಮಹಿಳೆಯರು ನೀವು ನಡೆಸುತ್ತಿರುವ ದಾಸೋಹ ಕಾರ್ಯಕ್ರಮಕ್ಕೆ 10.000 ಸಾವಿರ ದೇಣಿಗೆ ನೀಡುವ ಮೂಲಕ ಶುಭ ಹಾರೈಸಿದರು.ಮುಂದಿನ ದಿನಗಳಲ್ಲಿ ಪ್ರಾರಂಭಕ್ಕೆ ಅತಿಥಿಗಳನ್ನು ಅಹ್ವಾನ ಮಾಡುವ ಬಗ್ಗೆ ಮತ್ತು ಕಾರ್ಯಕ್ರಮ ಪ್ರಾರಂಭ ಮಾಡುವ ಬಗ್ಗೆ ಅಧ್ಯಕ್ಷರಾದ ಶ್ರೀ ಯುತ ಡಾ.ಸತೀಶ್ ಕುಮಾರ್ ವಿವರಣೆ ನೀಡಿದರು. ಅನ್ನದಾಸೋಹ ಸಮಿತಿಯ ಕಾರ್ಯದರ್ಶಿ ಸತ್ಯನಾರಾಯಣ ಮತ್ತು ಸಮಿತಿಯ ಎಲ್ಲಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.

ವರದಿ ಪ್ರಜಾ ಶಕ್ತಿ