ಶಿವಮೊಗ್ಗ ನಗರದ ಕುವೆಂಪು ಲಸಿಕಾ ಕೇಂದ್ರದಲ್ಲಿ ಇಂದು ಬೆಳಿಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಜಟಾಪಟಿ ನಡೆಯಿತು . ಮಧ್ಯಾಹ್ನ ಪ್ರಜಾಶಕ್ತಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಅನುಮಾನ ನಿಜ ಗೊಂಡಿತು. ಈ ಎಲ್ಲ ಜನರಿಗೂ ಟೋಕನ್ ಕೊಡಲಾಗುತ್ತಿದ್ದು ಟೋಕನ್ ತೆಗೆದುಕೊಂಡರು ಕ್ಯೂನಲ್ಲಿ ಹೊರಗೆ ಕಾಯ್ತಾ ಇರ್ತಾರೆ. ಇಂದು ಮಧ್ಯಾಹ್ನ ಪ್ರಜಾಶಕ್ತಿ ಟೀಮ್ ಅಲ್ಲಿಗೆ ಹೋದಾಗ ಟೋಕನ್ ನಂಬರ್ 140 ಕ್ಕೆ ನಿಲ್ಲಿಸಿ ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ಬಂದ ಸಿಬ್ಬಂದಿ ಜೊತೆಯಲ್ಲೇ ಕರೆದುಕೊಂಡು ಬಂದ ಇಬ್ಬರಿಗೆ ರಿಜಿಸ್ಟರ್ ನಲ್ಲಿ 181 ಹಾಗೂ 182 ಅವರ ಹೆಸರನ್ನು ನಮೂದಿಸಿ ತಕ್ಷಣ ಒಳಗೆ ಕಳಿಸುತ್ತಾರೆ. ಈ ಸಂದರ್ಭದಲ್ಲಿ ಅವರನ್ನು ಪ್ರಶ್ನಿಸಿದಾಗ ಸಾಹೇಬರ ಕಡೆಯವರು ಅದಕ್ಕಾಗಿ ಒಳಗೆ ಬಿಡುತ್ತೇವೆ ಎಂದು ಹೇಳಿದರು. ವಿಡಿಯೋ ನೋಡಿ. ಇಲ್ಲಿ ಸ್ಪಷ್ಟವಾಗಿ ರಾಜಕೀಯ ಹಾಗೂ ಹಣ ಬಲ ಇರುವವರಿಗೆ ವಿಐಪಿ ಎಂಟ್ರಿ ಮಾಡಿರುತ್ತಾರೆ. ಹಾಗಾದರೆ ಬೆಳಿಗ್ಗೆಯೇ ಬಂದು ಟೋಕನ್ ತಗೊಂಡು ಕಾಯುತ್ತಿರುವ ಜನಸಾಮಾನ್ಯರ ಕಷ್ಟದ ಪಾಡೇನು. ಜಿಲ್ಲಾಡಳಿತ ಈ ಕೂಡಲೇ ಈ ವಿಷಯಕ್ಕೆ ಗಮನ ಹರಿಸುವುದು ಸೂಕ್ತ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ . ವಿಡಿಯೋ ನೋಡಿ