ಅಣ್ಣಪ್ಪನಾಯ್ಕ ಸುಮಾರು 25 ವರ್ಷ ಈತನಿಗೆ ತಂದೆ ತಾಯಿ ಇರುವುದಿಲ್ಲ. ಇವನು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು , ಕೂಲಿ ಕೆಲಸ ಮಾಡಿದ ಹಣವನ್ನು ಕೇಳಿದ್ದಕ್ಕೆ ಮೇಸ್ತ್ರಿ ಮಂಜುನಾಥ್, ಮಂಜುನಾಥ್ ರವರ ತಂದೆ ಗುರುರಾಜ್, ಮಂಜುನಾಥ್ ರವರ ಚಿಕ್ಕಪ್ಪ ಮೂರ್ತಿ ಮತ್ತು ಮೂರ್ತಿಯವರ ಮಕ್ಕಳು ಇವರಗಳು ಎಲ್ಲರೂ ಸೇರಿ ಅಣ್ಣಪ್ಪ ನಾಯ್ಕ್ ನನ್ನು ಕೈಕಾಲುಗಳಿಂದ ಚೆನ್ನಾಗಿ ಹೊಡೆದು ತುಳಿದು ಸಾಯಿಸಲು ಪ್ರಯತ್ನಿಸಿದ್ದಾರೆ. ಈತನು ಪ್ರಜ್ಞಾಹೀನ ಆಗುವವರೆಗೂ ಹೊಡೆದಿದ್ದಾರೆ. ಆತನು ಈಗ ಕೋಮಾ ಹಂತದಲ್ಲಿದ್ದು , ಇವನಿಗೆ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಇವನ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ದಿನಾಂಕ: 13-08-2021 ರಂದು ರಾತ್ರಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಸದರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಮಂಜುನಾಥ್ ಗುರುರಾಜ್ ಮೂರ್ತಿ ಮತ್ತು ಮೂರ್ತಿಯವರ ಮಕ್ಕಳ ವಿರುದ್ಧ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಹಣಬಲದಿಂದ ಮತ್ತು ರಾಜಕೀಯ ಬಲದಿಂದ ಇವರುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸದರಿ ಅಣ್ಣಪ್ಪನಾಯಕ್ ಇವರುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸದರಿ ಅಣ್ಣಪ್ಪನಾಯಕ್ ಇವರ ಚಿಕಿತ್ಸೆಯ ವೆಚ್ಚವನ್ನು ಊರುನಾಯಕರು ನೋಡಿಕೊಳ್ಳುತ್ತಿದ್ದಾರೆ. ಇವರಿಗೆ ಪ್ರತಿ ದಿನಕ್ಕೆ ರೂ.70.000 ಖರ್ಚಾಗುತ್ತಿದೆ. ವೈದ್ಯರು ಈತನು ಉಳಿಯುವುದಿಲ್ಲ. ಮಣಿಪಾಲ್ ಗೆ ಕರೆದುಕೊಂಡು ಹೋಗಿ ಎಂದು ಹೇಳಿರುತ್ತಾರೆ. ಈತನ ಪ್ರಾಣವನ್ನು ಉಳಿಸಿ ಕೊಡಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ತಾವುಗಳು ಈ ಮೇಲ್ಕಂಡ ಆರೋಪಿಗಳಾದ ಮಂಜುನಾಥ್ ಗುರುರಾಜ್ ಮೂರ್ತಿ ಮತ್ತು ಇವರ ಮಕ್ಕಳ ಇವರುಗಳ ವಿರುದ್ದ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಂಡು ಅಣ್ಣಪ್ಪನಾಯಕ್ ಇವರ ಜೀವನವನ್ನು ಉಳಿಸಿಕೊಳ್ಳಬೇಕಾಗಿ ಹಾಗೂ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153