ಮಂಜುನಾಥ್ ಶೆಟ್ಟಿ…
ಶಿವಮೊಗ್ಗದಲ್ಲಿ ಹೈಕೋರ್ಟ್ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ವಕೀಲ ಸಂಘದ ಇಂದಿನಿಂದ ವಕೀಲರ ಭವನದ ಮುಂಭಾಗ ಅನ್ವಿಧಿಷ್ಟಾವಧಿ ಹೋರಾಟ ಪ್ರಾರಂಭಿಸಿದ್ದು ಶಿವಮೊಗ್ಗ ನಾಗರಿಕ ರಕ್ಷಣಾ ವೇದಿಕೆಗಳ ಒಕ್ಕೂಟ ಚೇಂಬರ್ ಆಫ್ ಕಾಮರ್ಸ್ ಹಾಗೂ ಇನ್ನಿತರ ಸಂಘಟನೆಗಳು ಬೆಂಬಲ ಸೂಚಿಸಿದೆ.
ಮಧ್ಯ ಕರ್ನಾಟಕ ಹೈಕೋರ್ಟ್ ಬೇಕೇ ಬೇಕು. ಶಿವಮೊಗ್ಗವನ್ನು ಕೇಂದ್ರವಾಗಿರಿಸಿ ಇಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದ್ದೇವೆ. ಯಾವುದೇ ಕಾರಣಕ್ಕೂ ಮಂಗಳೂರಿನಲ್ಲಿ ಹೈಕೋರ್ಟ್ ಪೀಠವಾದರೆ ಶಿವಮೊಗ್ಗದ ಕೇಸ್ ಗಳನ್ನು ಅಲ್ಲಿಗೆ ವರ್ಗಾಯಿಸಬಾರದು ಎಂದು ಪ್ರತಿಭಟನಾ ಕಾರರು ಅಗ್ರಹಿಸಿದ್ದಾರೆ.
ನಾಳೆಯಿಂದ ಹೋರಾಟಕ್ಕೆ ಕಾವು ಏರಳಿದ್ದು ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿದೆ.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಸ್ವಾಮಿ ಹೈಕೋರ್ಟ್ ಸ್ವೀಟರ್ ಸ್ಥಾಪನೆ ಹೊರಟ ಸಮಿತಿಯ ಅಧ್ಯಕ್ಷರಾದ ಬಸವನಗೌಡ್ರು ವೇದಿಕೆಯ ಕೆ ವಿ ವಸಂತ್ ಕುಮಾರ್ ಡಾ ಎ ಸತೀಶ್ ಕುಮಾರ್ ಶೆಟ್ಟಿ ಅಶೋಕ್ ಕುಮಾರ್ ಗಾಂಧಿ ಬಸಪ್ಪ ಮುಂತಾದವರು ಉಪಸ್ಥಿತರಿದ್ದರು.