ಶಿವಮೊಗ್ಗ ತಾಲ್ಲೂಕು ಕಚೇರಿ ವ್ಯಾಪ್ತಿಯಲ್ಲಿರುವ ನಗರ ಮತ್ತು ಗ್ರಾಮಾಂತರ ಪ್ರದೇಶದ ಅಕ್ರಮ ಭೂ ಮಾಫಿಯಾವನ್ನು ಹತ್ತಿಕ್ಕಲು ಉನ್ನತ ಮಟ್ಟದ ಪೊಲೀಸ್ ತಂಡ ರಚಿಸಬೇಕು ಅಕ್ರಮ ಭೂ ಮಾಫಿಯಾದಲ್ಲಿ ತೊಡಗಿರುವವರ ಮೇಲೆ ಗೂಂಡಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಗಡಿಪಾರು ಮಾಡಬೇಕು. ಹಾಗೂ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಕರವೇ ಯುವಸೇನೆ ಆಗ್ರಹಿಸುತ್ತಿರುವ ಬಗ್ಗೆ. * ಕಳೆದ 2010ರ ಸಾಲಿನಿಂದ 2021 ರ ಸಾಲಿನ ದಿನದವರೆಗೂ ನೂರಾರು ಎಕರೆ ಜಮೀನು ಕೆರೆಗಳು ಸಿಎ ನಿವೇಶನಗಳು ಮಕ್ಕಳ ಉದ್ಯಮಗಳ ಸಾರ್ವಜನಿಕ ಉದ್ಯಮ ವಲಯ ಸರ್ಕಾರಿ ಭೂಮಿ ವಾರಸುದಾರರಿಲ್ಲದ ಭೂಮಿಗಳು ಸ್ಮಶಾನ ಗೋಮಾಳದ ಭೂ ಪ್ರದೇಶಗಳಿಗೆ ಫೋರ್ಜರಿ ದಾಖಲಾತಿಗಳನ್ನು ಸೃಷ್ಟಿಸಿ ಹಾಗೂ ಕಾನೂನು ಬಾಹಿರವಾಗಿ ಸಿದ್ಧಪಡಿಸಲಾಗದ ಟಿಪ್ಪಣಿ ಕೈಬರಹಗಳ ದಾಖಲೆಗಳ ಮುಖೇನ ನ್ಯಾಯಾಲಯಕ್ಕೂ ವಂಚಿಸಿ ತಾಲ್ಲೂಕು ಕಚೇರಿಯಲ್ಲಿ ಸಕ್ರಮಗೊಳಿಸಿರುವ ಪ್ರಕರಣಗಳು ಒಂದೇ ಕುಟುಂಬಕ್ಕೆ ಹತ್ತಾರು ಎಕರೆ ಬಗರ್ ಹುಕಂ ಜಮೀನಿಗೆ ಖಾತೆ ಪಹಣಿ ಮಾಡಿರುವುದು ಖರಾಬು ಜಮೀನು ಜಾಗಗಳಿಗೆ ಅತಿಕ್ರಮ ಪ್ರವೇಶಿಸಿ ಬೇಲಿ ಹಾಕಲಾಗದ ಜಮೀನುಗಳಿಗೆ ಸೃಷ್ಟಿಸಲಾಗದ ನಕಲಿ ದಾಖಲೆಗಳನ್ನೇ ಸಕ್ರಮ ಮಾಡಿರುವುದು ತಾಲ್ಲೂಕು ಕಚೇರಿಯಲ್ಲಿನ ಹಳೆಯ ಮ್ಯಾನ್ಯುಯಲ್ ಕಡತಗಳಿಗೆ ಅಕ್ರಮ ಎಂಟ್ರಿಗಳನ್ನು ಮಾಡಿ ದಾಖಲೆಗಳನ್ನು ಮಾಡಿರುವುದು ನಗರ ಪ್ರದೇಶದಲ್ಲಿನ ಬಹುತೇಕ ಖಾಸಗಿ ಲೇ ಔಟ್ ಗಳ ಅಕ್ರಮಗಳಿಗೆ ಕಾರಣರಾಗಿರುವ ನೂರಾರು ಪ್ರಕರಣಗಳಲ್ಲಿ ತನಿಖೆ ನಡೆಸುವಂತೆ ಮೊದಲ ಹಂತದಲ್ಲಿ ಕೋರಿರುವ ಬಗ್ಗೆ .* ತಂಡ ರಚಿಸಲು ವಿಳಂಬವಾದರೆ “ವಿಧಾನಸೌಧ ಚಲೋ” ಹೋರಾಟವನ್ನು ಕರವೇ ಯುವಸೇನೆಯು ಹಮ್ಮಿಕೊಳ್ಳುತ್ತದೆ .

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ