ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ಆಲೋಚನೆಯೊಂದಿಗೆ ನಾಡು ನುಡಿ ನೆಲ ಜಲ ಭಾಷೆ ಶಿಕ್ಷಣ ರೈತರ ಮಹಿಳೆಯರ ಕಾರ್ಮಿಕರ ದೀನದಲಿತರ ಪರವಾಗಿ ನಮ್ಮ ಜಯ ಕರ್ನಾಟಕ ವೇದಿಕೆಯು ಕಳೆದ ಹಲವಾರು ವರ್ಷಗಳಿಂದ ಜಾತಿ ಭೇದವಿಲ್ಲದೆ ಈ ಸಮಯದ ಕಟ್ಟಕಡೆಯ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾಡಿನ ಜನತೆಗೆ ಸರ್ಕಾರದಿಂದ ಸಿಗುವ ಮೂಲಭೂತ ಸೌಕರ್ಯಗಳ ಪರವಾಗಿ ಸರ್ಕಾರ ಮತ್ತು ಜನರ ನಡುವೆ ಪಾರದರ್ಶಕ ಸೇತುವೆಯಾಗಿ ಯಾವುದೇ ಸ್ವಾರ್ಥವಿಲ್ಲದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿವೆ. ಸಮಾಜದಲ್ಲಿ ಇಂದು ನಡೆಯುತ್ತಿರುವ ಅರಾಜಕತೆ ಮೋಸ ವಂಚನೆಗಳನ್ನು ಹಲವಾರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ತುಮಕೂರಿನಲ್ಲಿ ನಡೆದ ಘಟನೆಯು ಎಲ್ಲರಿಗೂ ಆತಂಕಕಾರಿಯಾಗಿದೆ. ಅಷ್ಟರಲ್ಲೇ ಮತ್ತೆ ಇಂತಹ ಘಟನೆ ನಡೆದಿದ್ದು ತುಂಬಾ ನೋವಿನ ವಿಚಾರವಾಗಿದೆ ಕೂಡಲೇ ಈ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಿ ನಿರ್ಭಯಾ ಕೇಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಗಲ್ಲಿಗೇರಿಸಲು ಒತ್ತಾಯಿಸಿ ಜಯ ಕರ್ನಾಟಕ ಜನಪರ ವೇದಿಕೆಯು ಮನವಿ ಸಲ್ಲಿಸುತ್ತದೆ.

ಈ ಪ್ರಕರಣವು ಕರ್ನಾಟಕದ ಗೌರವ ಮರ್ಯಾದೆಯ ಪ್ರತಿಷ್ಠೆಯಾಗಿದ್ದು ಮೈಸೂರು ನಗರಕ್ಕೆ ಫ್ರಾನ್ಸಿಸ್ ಪದವರಿ ಎಂಬ ಹೆಸರಿದ್ದು ಈ ಘಟನೆಯಿಂದ ತಲೆ ತಗ್ಗಿಸುವಂತಾಗಿದೆ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಮದ್ಯಪಾನ ಸೇವನೆ ಗಾಂಜಾ ಡ್ರಗ್ಸ್ ಸೇವನೆಗೆ ಕಡಿವಾಣ ಹಾಕಬೇಕು ಯುವ ಸಮುದಾಯ ಈ ರೀತಿಯ ದುಶ್ಚಟಗಳಿಗೆ ಬಲಿಯಾಗಿ ಈ ರೀತಿಯ ಕೃತ್ಯಗಳು ಹೆಚ್ಚಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಎಲ್ಲಾ ಜನ ಪ್ರತಿನಿಧಿಗಳು ಒಂದಾಗಿ ಈ ವಿಚಾರದಲ್ಲಿ ರಾಜಕೀಯತರದೆ ಎಲ್ಲಾರು ನಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ನೀವು ಶೀಘ್ರವಾಗಿ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆ ಒತ್ತಾಯಿಸುತ್ತದೆ ಮುಖ್ಯಮಂತ್ರಿಗಳ ಹಾಗೂ ಗೃಹ ಸಚಿವರ ಸಂದೇಶವು ಇಂಥ ಕಾಮುಕರಿಗೆ ಎದೆ ನಡುಗಿಸುವಂಥ ಆಗಬೇಕು ಇನ್ನು ಮುಂದೆ ಇಂಥ ಕ್ರೂರ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲಲಿ. ಕೂಡಲೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇಲಾಖೆಗೆ ಬೇಕಾದ ಎಲ್ಲ ಸಹಕಾರವನ್ನು ಕೊಡಬೇಕು ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಇಲಾಖೆ ಕ್ರಮ ಕೈಗೊಳ್ಳಬೇಕು ಇಂತಹ ಕ್ರೂರ ಘಟನೆಯಿಂದ ಯುವತಿಗೆ ಹಾಗೂ ಪೋಷಕರಿಗೆ ಇಲಾಖೆ ಹಾಗೂ ಸರ್ಕಾರ ಧೈರ್ಯ ಹೇಳಿ ಎಲ್ಲ ಸೂಕ್ತ ಸಹಕಾರವನ್ನು ಕೊಡಬೇಕೆಂದು ಒತ್ತಾಯಿಸುತ್ತಿದೆ. ಹಾಗೆಯೇ ನೀವು ಮಾಡುವ ಉತ್ತಮ ಕೆಲಸಗಳಿಗೆ ನಮ್ಮ ಜಯ ಕರ್ನಾಟಕ ಜನಪರ ವೇದಿಕೆಯು ಸಂಪೂರ್ಣ ಸಹಕಾರ ನೀಡುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153