ಸವಳಂಗ ರಸ್ತೆಯಲ್ಲಿ ಗಣಪತಿ ದೇವಸ್ಥಾನದಿಂದ ಎಲ್ ಬಿಎಸ್ ನಗರದ ತನಕ ರಸ್ತೆ ವಿಭಜಕದಲ್ಲಿ ವಿದ್ಯುತ್ ದೀಪ ಅಳವಡಿಕೆ ಪೂರ್ಣಗೊಂಡಿತ್ತು. ಸದರಿ ಕಾಮಗಾರಿ ಐವತ್ತೊಂಭತ್ತು ಲಕ್ಷದಲ್ಲಿ ಪೂರ್ಣಗೊಂಡಿದ್ದು ಇಂದು ಸಂಜೆ 6ಗಂಟೆಗೆ ನವಲೆ ಕೆರೆ ಹತ್ತಿರ ನಡೆದ ಸರಳ ಸಮಾರಂಭದಲ್ಲಿ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮೇಯರ್ ಸುನೀತಾ ಅಣ್ಣಪ್ಪ , ಉಪಮೇಯರ್ ಗನ್ನಿ ಶಂಕರ್ , ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾದ ಚನ್ನಬಸಪ್ಪ , ಈವರೆಗೂ ಕುಡಗೋಲ ನುಂಗಿಸೋ ಜ್ಯೋತಿಪ್ರಕಾಶ್ ಮಹಾನಗರ ಪಾಲಿಕೆ ಸದಸ್ಯರಾದ ಧೀರಜ್ ಹೊನ್ನವಿಲೆ, ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವಾಸ್ ಮುಂತಾದವರು ಉಪಸ್ಥಿತರಿದ್ದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ