ಶಿವಮೊಗ್ಗ ನಗರದ ಅಶೋಕ ನಗರ ಮುಖ್ಯರಸ್ತೆಯಲ್ಲಿ ಇರುವ ಸಿಂಧೂ ಷಟಲ್ ಕೋರ್ಟ್ ಆವರಣದಲ್ಲಿ ಗಾಮನಗಟ್ಟಿ ಸ್ವಸಹಾಯ ಸಂಘ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಟೋಕಿಯೋ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಸಾಧನೆಗೈದು ಪದಕ ಗಳಿಸಿದ ವೀರ ಕ್ರೀಡಾಯೋಧರಿಗೆ ಸ್ಮರಿಸುತ್ತಾ ಜೈಕಾರ ಕೂಗುತ್ತ, ಪಟಾಕಿ ಹೊಡೆದು ಶಬ್ದ ಮಾಲಿನ್ಯ ಹಾಗೂ ವಾಯುಮಾಲಿನ್ಯ ಗೊಳಿಸದೆ ಕ್ರೀಡಾಭಿಮಾನಿಗಳು ಒಂದೊಂದು ಗಿಡವ ನೆಟ್ಟು ಸಂಭ್ರಮಾಚರಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಗಾಮನಗಟ್ಟಿ ಸ್ವ ಸಹಾಯ ಸಂಘದ ಅಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು, ಷಟಲ್ ಕೋರ್ಟ್ ನ ಗೌರವಾಧ್ಯಕ್ಷರು ಹಾಗೂ ಶಿವಮೊಗ್ಗ ನಗರದ ಮಾಜಿ ಶಾಸಕರಾದ ಶ್ರೀ ಕೆಬಿ ಪ್ರಸನ್ನಕುಮಾರ್ ರವರು, ಷಟಲ್ ಬ್ಯಾಡ್ಮಿಂಟನ್ ಕ್ರೀಡಾಭಿಮಾನಿಗಳಾದ ಸುನೀಲ್, ಚಂದ್ರು, ಸೇತುರಾಂ, ನಾರಾಯಣ, ಮಧುಮತಿ,ಜವಾದ್, ಅಫ್ಝಲ್, ಪಾಂಡಯ್ನ್ ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ