ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪರವರು ಕೋವಿಡ್ ಮೂರನೇ ಅಲೆಯಲ್ಲ ಮೂವತ್ತನೇ ಅಲೆ ಬಂದರೂ ಹೆದರುವುದಿಲ್ಲ. ಅಷ್ಟೊಂದು ಔಷಧ ಹಾಗೂ ಸಲಕರಣೆಗಳ ವ್ಯವಸ್ಥೆಯಾಗಿದೆ. ಮಾನವೀಯ ಸ್ಪಂದನೆಯಿಂದಾಗಿ ಕೋಟ್ಯಂತರ ರೂ ಮೌಲ್ಯದ ಸಲಕರಣೆಗಳು ಬಂದಿವೆ ಅದರಲ್ಲಿ ವೆಂಟಿಲೇಟರ್ ಆಕ್ಸಿಜನ್ ಮೊದಲಾದವು ಸೇರಿವೆ. ಮೊದಲಿನಿಂದಲೂ ಭೂಪಾಳಂ ಕುಟುಂಬ ಕೊಡುಗೆದಾರರಲ್ಲಿ ಮುಂದಿಟ್ಟು ಈಗಲೂ ಆ ಕುಟುಂಬದವರು ಅದನ್ನು ಉಳಿಸಿಕೊಂಡಿದ್ದಾರೆ ಅವರ ಆಶ್ರಯದಲ್ಲಿಯೇ ಅನೇಕರು ನೆರವು ಪಡೆದಿರುತ್ತಾರೆ. ಆದಿವಾಸಿ ಭಾರತೀಯ ಭೂಪಾಳಂ ಕುಟುಂಬದವರು ರೋಟರಿ ಮೂಲಕ ನೀಡಿರುವ ಕೋವಿಡ್ ನಿಯಂತ್ರಣದ ರಾಷ್ಟ್ರೀಯ ಕೊಡುಗೆ 5 ಕೋಟಿ ರೂ ಮೌಲ್ಯದ ಸಲಕರಣೆಗಳು ಹಸ್ತಾಂತರ ಕಾರ್ಯಕ್ರಮವನ್ನು ಮೆಗಾನ್ ಆಸ್ಪತ್ರೆಯಲ್ಲಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾಕ್ಟರ್ ಶ್ರೀಧರ್, ಡಾ. ಪಿ.ನಾರಾಯಣ, ಡಾ.ಸಿದ್ದಪ್ಪ, ಡಾ. ಸಿದ್ಧನಗೌಡ, ದಿವಾಕರ್ ಶೆಟ್ಟಿ , ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ