74 ವರ್ಷಗಳ ಸ್ವಾತಂತ್ರ್ಯ ನಂತರದಲ್ಲಿ ಭಾರತ ಒಂದು ವಿಷ ವರ್ತುಲದಲ್ಲಿ ಸಿಗುತ್ತಿದೆ ಅನಿಸುತ್ತಿದೆ. ಮತೀಯ ಆಧಾರದ ಮೇಲೆ ದೇಶ ವಿಭಜನೆಯ ನಂತರವೂ ಭಾರತದಲ್ಲಿ ಮತೀಯವಾದ ಇಡೀ ದೇಶದ ಐಕ್ಯತೆನೇ ತಿನ್ನುತ್ತಿರುವ ಸನ್ನಿವೇಶದಲ್ಲಿ ಉಗಮಗೊಂಡ ಕೇಂದ್ರ ಸರ್ಕಾರ ಈಗ ಮನೆಯಲ್ಲಿ ಮೈ ಕಾಯಿಸಿಕೊಳ್ಳುವ ಕುತಂತ್ರ ಮಾಡುತ್ತಿದೆ ಉರಿಯುವ ಮನೆಯಲ್ಲಿ ಬೇಳೆ ಬೇಯಿಸಿಕೊಳ್ಳುವಂತೆಯೇ ಹಿಂದೂ ಮುಸ್ಲಿಮ್ ನಡುವಣ ದಳ್ಳುರಿಯಲ್ಲಿ ಹಿಂದಿ ಹೇರಿಕೆ ಮಾಡುವ ಕುಯುಕ್ತಿ ಮಾಡುತ್ತಿದೆ. ಇದರ ಅರಿವಿರದ ಕರ್ನಾಟಕದ ಜನ ಹಿಂದೂತ್ವದ ಹೆಸರಿನಲ್ಲಿ ಮತ ಕೇಳುವ ಕೇಂದ್ರ ಸರ್ಕಾರವನ್ನು ಕುರುಡರಂತೆ ನಂಬುವ ಮೂಲಕ ತಮ್ಮ ಅಸ್ತಿತ್ವಕ್ಕೆ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. ಸ್ವಾತಂತ್ಯ ಆರಂಭದಲ್ಲಿ ಹಿಂದಿ ವಾಲಾಗಳು ಹಿಂದಿ ರಾಷ್ಟ್ರಭಾಷೆಯಾಗಬೇಕೆಂದು ಹೆಂಡ ಕುಡಿದ ಕೋತಿಗಳಂತೆ ಆಡುವಾಗ ಸರಿಯಾದ ಪೆಟ್ಟು ಹೊತ್ತವರು ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಸುಮಾರು 72 ವರ್ಷಗಳಿಂದ ತೆಪ್ಪಗೆ ಮಲಗಿದ್ದ ಹಿಂದೂ ವಾದಿಗಳಿಗೆ ಕೇರಳ ಸರ್ಕಾರ ಉತ್ತರ ಭಾರತದ ಮೂಲ ಉದ್ದೇಶದ ಅಜೆಂಡಾಗಳನ್ನು ಒಂದೊಂದಾಗಿ ಹೊರಗೆಡುವುತ್ತಿದೆ .ಆದ್ದರಿಂದ ಮುಂದಿನ ಸೆಪ್ಟೆಂಬರ್ 14 ರಂದು ನಡೆಯಲಿರುವ “ರಾಷ್ಟ್ರೀಯ ಹಿಂದಿ ದಿವಸ್” ಆಚರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕವು “ಹಿಂದಿ ವಿರೋಧಿ”ದಿನವಾಗಿ ಜಿಲ್ಯಾದ್ಯಂತ ಆಚರಿಸುತ್ತಿದೆ. ಈ ದಿನ ಹಿಂದಿ ವಿರೋಧಿ ದಿನವಾಗಿ ಪ್ರತಿಭಟನೆ ನೆಡೆಸಲಾಗುವುದು. ಮೆರವಣಿಗೆ ಹೊರಟು ಜನರಲ್ಲಿ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಹುನ್ನಾರಗಳನ್ನು ಮನವರಿಕೆ ಮಾಡಿಕೊಟ್ಟು ಜಾಗೃತಿ ಮೂಡಿಸಲಾಗುವುದು ನಂತರ ಹಿಂದಿ ಭಾಷೆ ಬಲವಂತವಾಗಿ ಏರುತ್ತಿರುವ ಕೇಂದ್ರ ಸರ್ಕಾರದ ದಬ್ಬಾಳಿಕೆ ಖಂಡಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಕರ್ನಾಟಕದಲ್ಲಿ ಜಾರಿಗೆ ತಂದಿರುವ ಹಿಂದಿ ಕಲಿಯುವ ಭಾಷಾಸೂತ್ರವನ್ನು ತಡೆಹಿಡಿಯುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ. ಈ ಸಂದರ್ಭದಲ್ಲಿ ವಿಜಯಗೌಳಿ , ಶುಬೋದಯ, ರಂಜೀತ್, ಶಿವಣ್ಣ ಸುಡುಾರು,ಇನ್ನಿತರರು ಇದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153