ಶಿವಮೊಗ್ಗ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ನರೇಂದ್ರ ಮೋದಿ ವಿಚಾರ ಮಂಚ್ ಇದರ ಅಧ್ಯಕ್ಷರಾದ ಸಂತೋಷ್ ಬಳೆಗೆರೆ ಹಾಗೂ ಪ್ರಧಾನ ಅರ್ಚಕರಾದ ಆ ಪ.ರಾಮ್ ಭಟ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬದ ಪ್ರಯುಕ್ತ ನರೇಂದ್ರ ಮೋದಿ ವಿಚಾರ ಮಂಚ್ ವತಿಯಿಂದ ಸಮಸ್ತ ಲೋಕ ಕಲ್ಯಾಣಾರ್ಥವಾಗಿ ಶಿವಮೊಗ್ಗ ನಗರದ ರವೀಂದ್ರನಗರ ಶ್ರೀ ಗಣಪತಿ ದೇವಸ್ಥಾನದಲ್ಲಿ ಭೀಮರಥ ಶಾಂತಿ ಹಾಗೂ ಮಹಾಗಣಪತಿ ಯಾಗವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ವಿವರಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಹರಿಕೃಷ್ಣ ಎಂ ಬಿ ದೀನದಯಾಳ್ ಸುರೇಖಾ ಮುರುಳೀಧರ್ ಸತೀಶ್ ಚಂದ್ರಶೇಖರ್ ಶರತ್ ಕಲ್ಯಾಣಿ ಸುಹಾಸ್ ಶಾಸ್ತ್ರಿ ಗಣೇಶ ಬಿಳಕಿ ಚಿನ್ಮಯ್ ವಿನಯ್ ಪ್ರಮುಖಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ