ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ ಉತ್ತರ ಪ್ರದೇಶದ ಲಿಕ್ಕಿಂಪೂರ ಖೇರಿ ಯಲ್ಲಿ ನಡೆದ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಅಜಯ್ ಮಿಶ್ರ ರವರ ಮಗ ಆಶಿಶ್ ಮಿಶ್ರ ಜೀಪನ್ನು ಹಾಯಿಸಿ ಹತ್ತೆಗೈದುದರ ವಿರುದ್ಧ ಗಾಂಧಿ ಪಾರ್ಕ್ ನಲ್ಲಿ ಮೌನ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್,ವೈ ಹೆಚ್.ನಾಗರಾಜ್,ಶೇಷಾದ್ರಿ,ಚಂದ್ರ ಭೂಪಾಲ್,ಮೊಹಮ್ಮದ್ ಆರಿಫ್ ಉಲ್ಲ,ಹೆಚ್. ಸಿ.ಯೋಗೀಶ್,ಯಮುನಾ ರಂಗೇಗೌಡ,ಸುವರ್ಣ ,ವಿವಿಧ ಘಟಕಗಳ ಪದಾಧಿಕಾರಿಗಳು,ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಎನ್ ಡಿ ಪ್ರವೀಣ್ ಕುಮಾರ್ ಮುಂತಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…