ನಿಂದಕರಿದ್ದಾಗಲೆ
ಸಾಧಕರು ಬೆಳೆಯುವುದು
ಕಾಲು ಎಳೆಯುವವರಿದ್ದಾಗಲೆ
ಭದ್ರವಾಗಿ ಕಾಲೂರಿ ನಿಲ್ಲುವುದು

ಚಿನ್ನವನ್ನು ಪರೀಕ್ಷಿಸಿ ನೋಡುವರು
ಕಬ್ಬಿಣ ವನ್ನಲ್ಲ…
ತಿಪ್ಪೆಯಲ್ಲಿ ಬಿದ್ದರೂ
ಸ್ವರ್ಣ ತನ್ನ ಬೆಲೆ ಕಳೆದುಕೊಳ್ಳುವುದಿಲ್ಲ

ಕೈಲಾಗದವರು ಮೈಪರಚಿಕೊಳ್ಳುವರು
ಅದು ಅವರ ದೌರ್ಬಲ್ಯ
ನಯ ವಿನಯತೆ ಪರಿಶ್ರಮದಿಂದ ಮಾತ್ರ ಸಾಧಿಸಬಹುದು ಎಲ್ಲರೆದೆಯಲ್ಲಿ ಪ್ರಾಬಲ್ಯ

ಒಡೆದು ಆಳುವ ನೀತಿ
ಈ ಮಣ್ಣಿನಲ್ಲಿ ಬಹುಕಾಲ ಉಳಿಯುವುದಿಲ್ಲ…
ಸತ್ಯ, ನ್ಯಾಯ, ಪ್ರಾಮಾಣಿಕತೆ
ನಿಸ್ವಾರ್ಥತೆಗೆ ಎಂದಿಗೂ ಅಪಜಯವಿಲ್ಲ..

*ಶ್ರೀಮತಿ.ಅನಿತಕೃಷ್ಣ*ಶಿಕ್ಷಕಿ.ತೀರ್ಥಹಳ್ಳಿ