ಶಿವಮೊಗ್ಗ ನ್ಯೂಸ್…

ಕರ್ನಾಟಕ ರಕ್ಷಣಾ ವೇದಿಕೆ ಎನ್ ಆರ್ ಪುರ ತಾಲ್ಲೂಕು ಘಟಕದ ನೇತೃತ್ವದಲ್ಲಿ ಎನ್ ಆರ್ ಪುರದ ಪ್ರಮುಖ ವೃತ್ತದಲ್ಲಿ “”ಕುವೆಂಪು ಪ್ರತಿಮೆ”” ಯನ್ನು ಈ ದಿನ ಬೆಳಿಗ್ಗೆ ಪ್ರತಿಷ್ಠಾಪಿಸಲಾಯಿತು ಸ್ವಲ್ಪ ಸಮಯದಲ್ಲೇ ಪೋಲಿಸರು ಮತ್ತು ಪುರಸಭೆ ಅಧಿಕಾರಿಗಳು ಬಂದು ಕುವೆಂಪು ಪ್ರತಿಮೆಯನ್ನು ಕಿತ್ತು ಪುರಸಭೆಯ “””ಕಸದ ಗಾಡಿಯಲ್ಲಿ””” ತುಂಬಿಕೊಂಡು ಹೋಗಿರುತ್ತಾರೆ ಈ ವಿಚಾರವನ್ನು ಖಂಡಿಸಿ ಶಿವಮೊಗ್ಗ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.

ಕೂಡಲೇ ಕುವೆಂಪು ಪ್ರತಿಮೆಯನ್ನು ಅದೇ ಜಾಗದಲ್ಲಿ ಅನಾವರಣಗೊಳಿಸಬೇಕು ಮತ್ತು ಕಾರ್ಯಕರ್ತರ ಮೇಲೆ ಹಾಕಿದ ಮೊಕದ್ದಮೆಗಳನ್ನು ಹಿಂದೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಯಿತು ಇಲ್ಲದಿದ್ದಲ್ಲಿ “”ಅಖಂಡ ಕರ್ನಾಟಕದಾದ್ಯಂತ “” “”ಕರ್ನಾಟಕ ರಕ್ಷಣಾ ವೇದಿಕೆ”” ನೇತೃತ್ವದಲ್ಲಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…