ಚನ್ನಗಿರಿಯಲ್ಲಿ ಇಂದು ಪುನೀತ್ ರಾಜಕುಮಾರ ಶ್ರದ್ಧಾಂಜಲಿ ಸ್ಮರಣಾರ್ಥ ಕಾರ್ಯಕ್ರಮಕ್ಕೆ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಮ.ನಿ.ಪ್ರ. ಡಾ || ಬಸವ ಜಯಚಂದ್ರ ಮಹಾಸ್ವಾಮಿಗಳು ಹಾಲಸ್ವಾಮಿ ವಿರಕ್ತಮಠ ಡಾ || ಕೇದಾರಲಿಂಗ ಶಾಂತ ವೀರ ಶಿವಚಾರ್ಯ ಸ್ವಾಮಿಗಳು , ಸನ್ಮಾನ್ಯ ಶಾಸಕರು ಮಾಡಾಳ್ ವಿರೂಪಾಕ್ಷಪ್ಪ ನವರು ಉಪಸ್ಥಿತರಿದ್ದರು.

ಹಾಗೂ ಪುನೀತ್ ರಾಜಕುಮಾರ್ ರವರ ಕೊನೆಯ ಚಲನಚಿತ್ರ ಜೇಮ್ಸ್ ಚಿತ್ರದಲ್ಲಿ ಸಹ ನಟನಾಗಿ ನಟನೆ ಮಾಡಿದ” ಮಣಿ ಮೈದೊಳ್ “ರವರು ಕೂಡ ಬಂದು ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಕಳೆದ ಕ್ಷಣಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳಾದ ಮಂಜು , ಪ್ರಸನ್ನ ಲಕ್ಷ್ಮೀಶ್ವರ , ಪುನೀತ್ , ಮೈಲಾರಿ , ತಾರೇಶ್ , ಮದು , ಚಂದು , ಚೇತತನ್ ಇನ್ನೀತರು ಕಣ್ಣನ್ನು ದಾನ ಮಾಡುವ ಒಂದು ಮಹತ್ಕಾರ್ಯಕ್ಕೆ ಸಹಿ ಹಾಕಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…