ಕುಪ್ಪಳ್ಳಿ ನ್ಯೂಸ್…

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ಜಾಗೃತಿ ಟ್ರಸ್ಟ್ ವತಿಯಿಂದ ಕುವೆಂಪು ಕನ್ನಡದ ಕಂಪು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು ಕುವೆಂಪು ಹೆಸರಿನಲ್ಲಿ ಜಾಗೃತಿ ಟ್ರಸ್ಟ್ ಮತ್ತು ಸ್ಥಳೀಯರ ಸಹಕಾರದಿಂದ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಕರ್ನಾಟಕದ ನೆಲ-ಜಲ-ಭಾಷೆಯ ವಿಷಯ ಬಂದಾಗ ಎಲ್ಲರೂ ಜೊತೆಗೂಡಬೇಕು. ಆದಷ್ಟು ಕನ್ನಡಿಗರು ಕನ್ನಡದಲ್ಲಿ ವ್ಯವಹಾರ ಮಾಡಬೇಕು.

ಅದೇ ಸಂದರ್ಭದಲ್ಲಿ ಸಚಿವರು ಮಕ್ಕಳ ದಿನಾಚರಣೆ ಆಚರಿಸಿದರು. ಕವಿಶೈಲ ಕವನ ಸಂಕಲನ ಮತ್ತು ಮಣಿ ಮೋಹನ ವಿರಚಿತ ಕ್ಷೇತ್ರ ಕಥನಗಳು ಕೃತಿಗಳು ಸಚಿವರು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನ್ಯೂಸ್ ವಾರಿಯರ್ಸ್ ಪತ್ರಿಕೆ ಸಂಪಾದಕರಾದ ರಘುರಾಜ್.ಎಚ್. ಕೆ ನಿಶ್ಚಲ್ ಜಾದೂಗಾರ್,ಮಂಜುನಾಥ್, ವೀರಭದ್ರಪ್ಪ ,ಮಣಿ ಮೋಹನ್, ಹುಲಿಯೂರು ಲಕ್ಷ್ಮೀನಾರಾಯಣ, ಶಿವರಾಜ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…