ಹರಿಕಥಾ ರಂಗದ ದಿಗ್ಗಜ ಕಲಾವಿದರು ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನಿರ್ದೇಶಕರಾದ ಶ್ರೀ ರಾಜಾರಾಮ್ ಭಟ್ ರವರ ದೊಡ್ಡಪ್ಪನವರಾದ ಶ್ರೀ “ಹರಿದಾಸ ನೀವಣೆ ಗಣೇಶ್ ಭಟ್’ ರವರು ಇಂದು ನಿಧನರಾದರೆಂಬ ವಿಷಯ ತಿಳಿದು ದುಃಖವಾಯಿತು….

ಶ್ರೇಷ್ಠ ಯಕ್ಷಗಾನ ಕಲಾವಿದರು ತಾಳಮದ್ದಳೆ ಅರ್ಥಧಾರಿ ನಾಡು ಕಂಡ ಶ್ರೇಷ್ಠ ಪ್ರವಚನಕಾರರಾದ ಇವರು, ಯಕ್ಷ ಸಿರಿ ಯಕ್ಷಗಾನ ಕಲಾರಂಗ ಪ್ರಶಸ್ತಿ ಪುರಸ್ಕೃತರು…
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರ ಜೀವನದ ಬಗ್ಗೆ ಸಾಕ್ಷ್ಯ ಚಿತ್ರವನ್ನು ಮಾಡಿದೆ…

ಅಂತಹ ಹರಿಕಥಾ ರಂಗದ ದಿಗ್ಗಜರಾದ ಶ್ರೀ ಹರಿದಾಸ ನೀವಣೆ ಗಣೇಶ ಭಟ್ಟರು(77) ನಮ್ಮನ್ನೆಲ್ಲಾ ಆಗಲಿರುವುದು ವಿಷಾದದ ಸಂಗತಿ…

ಕೊರಗದೆ ನರಳದೆ
ಸೇವೆಮಾಡಿಸಿಕೊಳ್ಳದೆ
ಕೊನೆತನಕ ಜಪ ಮಾಡುತ್ತಾ
ಕೊನೆಯುಸಿರು ಎಳೆದಿದ್ದು ಅವರ ಧೀಮಂತ ಜೀವನಕ್ಕೆ ಸಾಕ್ಷಿ…

ಭಗವಂತ ಇವರ ದಿವ್ಯಾತ್ಮಕ್ಕೆ ಚಿರಶಾಂತಿ ನೀಡಿ, ಕುಟುಂಬವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಎಸ್.ದತ್ತಾತ್ರಿ