ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಜಿಲ್ಲೆಯ ಟಿಪ್ಪುನಗರದ ಬಲಭಾಗದಲ್ಲಿರುವ ದಲಿತರ ಸ್ಮಶಾನದಲ್ಲಿ ಕಸದ ರಾಶಿ ಹಾಗೂ ಗಿಡಮರಗಳು.ಯಾವುದೇ ಒಬ್ಬ ವ್ಯಕ್ತಿ ಮರಣ ಹೊಂದಿದರೆ ಅವರ ಅಂತ್ಯಕ್ರಿಯೆಯನ್ನು ಕೂಡ ಸರಿಯಾದ ರೀತಿಯಲ್ಲಿ ಮಾಡಲಾಗಿರುವುದಿಲ್ಲ ಕಾರಣ ಅಲ್ಲಿ ಬೆಳೆದಿರುವ ಮರಗಿಡಗಳು ಹಾಗೂ ಕಸದ ರಾಶಿ.

ಈ ಒಂದು ದಲಿತ ಸ್ಮಶಾನಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು ಇದುವರೆಗೂ ಕೂಡ ಯಾವುದೇ ರೀತಿಯ ಕಾಮಗಾರಿಗಳನ್ನು ಕೈಗೊಂಡಿರುವುದಿಲ್ಲ. ಇದರ ಬಗ್ಗೆ ಮಹಾನಗರ ಪಾಲಿಕೆಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ದಯಮಾಡಿ ಅಧಿಕಾರಿಗಳು ಒಮ್ಮೆ ಭೇಟಿ ಕೊಟ್ಟು ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಕೊಡಬೇಕು.

ಈ ಒಂದು ಕಾರ್ಯಕ್ಕೆ ಅಧಿಕಾರಿಗಳು ಕಾರ್ಯ ಕೈಗೊಳ್ಳದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಉಗ್ರ ಹೋರಾಟ ವಾಗಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ. ಮಧುಸೂದನ್ ಎಸ್. ಎಂ. ಜಿಲ್ಲಾ ಉಸ್ತುವಾರಿ ರವಿಪ್ರಸಾದ್. ಉಪಾಧ್ಯಕ್ಷರು ಎo ನಯಾಸ್. ಕಾರ್ಯದರ್ಶಿ ನೂರುಲ್ಲಾ. ಭರತ್ ರಘು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…