ಶಿವಮೊಗ್ಗ:ಪುನೀತ್ ರಾಜ್ಕುತಮಾರ್ ಅತ್ಯಂತ ವಿನಯವಂತಿಕೆ ಹೊಂದಿದ್ದು, ಮಾನವೀಯ ನಡವಳಿಕೆಯಿಂದ ಜನರ ಪ್ರೀತಿ ವಿಶ್ವಾಸಗಳಿಸಿದ್ದರೂ ಎಂದು ಪತ್ರಕರ್ತ ಟೆಲೆಕ್ಸ್ ರವಿಕುಮಾರ್ ಹೇಳಿದರು.

ಅವರು ನೆನ್ನೆ ಟ್ಯಾಂಕ್ ಮೊಹಲ್ಲದ 9ನೇ ತಿರುವಿನಲ್ಲಿರುವ ಜೈ ಭುವನೇಶ್ವರಿ ಸದ್ಭಾವನಾ ಕನ್ನಡ ಯುವಕರ ಸಂಘದ ಆಶ್ರಯದಲ್ಲಿ ನಡೆದ ಪುನೀತ್ ರಾಜ್ಕು್ಮಾರ್ ಅವರ ಶ್ರದ್ಧಾಂಜಲಿ ಸಂಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪುನೀತ್ ರಾಜ್ಕು:ಮಾರ್ ಪ್ರೀತಿ, ವಿಶ್ವಾಸಗಳಿಂದಲೇ ಕನ್ನಡ ನಾಡಿನ ಮನೆ ಮಾತಾಗಿದ್ದರು. ಅವರ ಮಾದರಿಯ ಗುಣಗಳು ನಟನೆಗೂ ಆಚೆ ಕರೆದುಕೊಂಡು ಹೋಗಿ ಶ್ರೇಷ್ಠತೆಯನ್ನು ಪಡೆದಿದ್ದರು.

ಅವರಿಗೆ ವಿಶ್ವದ ತುಂಬಾ ಅಭಿಮಾನಿಗಳಿದ್ದಾರೆ ಮತ್ತು ಯಾವ ಪ್ರತಿಫಲ ಪೇಕ್ಷೆಯಿಲ್ಲದ ಅವರ ಸೇವೆ ಪ್ರತಿದಿನ ಇದ್ದು, ಹೊಸದಾಗಿ ಗೋಚರವಾಗಿ ಅವರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೈಯುತ್ತಿವೆ ಎಂದರು. ಜೈ ಭುವನೇಶ್ವರಿ ಸದ್ಭಾವನಾ ಕನ್ನಡ ಯುವಕರ ಸಂಘದಿಂದ ನಡೆದ ಈ ವಿಶೇಷ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸೂಲಯ್ಯ, ಮುಖಂಡರಾದ ಮೇಘರಾಜ, ಲಕ್ಷ್ಮಣ, ಅರ್ಬುದಾಸ್ವಾಮಿ, ಅಣ್ಣಪ್ಪ, ಮೂರ್ತಿ, ಚಂದ್ರು ಮತ್ತಿತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…