ಶಿವಮೊಗ್ಗದ ಕಲ್ಲಹಳ್ಳಿ ಯಲ್ಲಿರುವ ಗುಡ್ಲಕ್ ಅರೈಕೆ ಕೇಂದ್ರಕ್ಕೆ ಶಿವಮೊಗ್ಗ ಇನ್ಹರ್ ವ್ಹೀಲ್ ಕ್ಲಬ್ ವತಿಯಿಂದ ಜಿಲ್ಲಾ ಇನ್ಹರ್ ವ್ಹೀಲ್ ಚ್ಯಾರ್ಮೇನ್ ರ ಅಧಿಕೃತ ಬೇಟಿ ಸಂದರ್ಬದಲ್ಲಿ ಕೊಡುಗೆಯಾಗಿ ರೂ.5000/ ನ್ನು ಅಧ್ಯಕ್ಷರಾದ ಛಾಯ ವೀರಣ್ಣರವರು ಕ್ಲಬ್ ನ ಪರವಾಗಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಚ್ಯಾರಮೇನ್ ಪುಷ್ಪಾಗುರುರಾಜ ಮಾತನಾಡಿ ಅನಾಥಾಶ್ರಮದ ಮೂಲಕ ಹಿರಿಯರ ಸೇವೆ ಮಾಡುವ ಮನಸ್ಸು ಎಲ್ಲರಲ್ಲೂ ಬರಲಿ.

ನೀವು ಮಾಡುವ ಸೇವಾ ಕಾರ್ಯ ಸಮಾಜಕ್ಕೆ ಮಾದರಿಯಾಗಲಿ ಅಂತ ಹೇಳಿದರು.ರಂಜಿನಿ ದತ್ತಾತ್ರಿಯವರು ಕೇಂದ್ರದ ಪಲಾನುಭವಿಗಳಿಗೆ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನೀಡಿದರು. ರವೀಂದ್ರನಾಥ ಐತಾಳರು ಅರೈಕೆ ಕೇಂದ್ರದ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ದೀಪಾ ಚಂದನಾ, ನಳಿನಿ ಅರ್ ಐತಾಳ ರೋಟರಿಯನ್ ವೀರಣ್ಣ ರವರು ಉಪಸ್ಥಿತರಿದ್ದರು. ಅರೈಕೆ ಕೇಂದ್ರದ ಕಾರ್ಯದರ್ಶಿ ಪಂಚಾಕ್ಷರಿ ಯವರು ಎಲ್ಲರಿಗೂ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…