ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಸಮತಾವಾದ ರಾಜ್ಯಾಧ್ಯಕ್ಷರಾದ ಎಚ್ ಮಾರಪ್ಪನವರು ಡಿಸೆಂಬರ್ 6ರಂದು ಅಂಬೇಡ್ಕರ್ ರವರ ಅರುವತ್ತೈದನೇ ಮಹಾಪರಿನಿರ್ವಾಣದ ಅಂಗವಾಗಿ ಸ್ವಾಭಿಮಾನಿ ಸಂಕಲ್ಪ ದಿನ ಆಚರಿಸಲು ನಿರ್ಧರಿಸಲಾಗಿದ್ದು ಅದೇ ದಿನ ಬೃಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ತೆರಳಿ ವಿಧಾನಸೌಧದ ಮುಂಭಾಗದಲ್ಲಿರುವ ಡಾಕ್ಟರ್ ಅಂಬೇಡ್ಕರ್ ಅವರ ಪ್ರತಿಮೆಗೆ ಒಂದೊಂದು ಗುಲಾಬಿ ಹೂವನ್ನು ಅರ್ಪಿಸಲಾಗುವುದು ಎಂದು ತಿಳಿಸಿದರು.

ದಿನಾಂಕ 6 ರಂದು ಸೋಮವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಬನ್ನಪ್ಪ ಪಾರ್ಕ್ ನಿಂದ ವಿಧಾನಸೌಧ ಮುಂಭಾಗದ ಬಿಆರ್ಅಂಬೇಡ್ಕರ್ ವರೆಗೆ ಬೃಹತ್ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಈ ಜಾಥಾದಲ್ಲಿ ಭಾಗವಹಿಸಲು ಕೋರಿಕೊಂಡರು. ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷರಾದ ಮುನಿಬೈರಪ್ಪ , ಬೇಗೂರು ಟಿ ಚಂದ್ರಪ್ಪ ಮುನಿರಾಜು ರಮೇಶ್ ವೆಂಕಟಾಚಲಪತಿ ಉಪಸ್ಥಿತರಿದ್ದರು.

ವರದಿ ಮಂಜುಳಾ ರೆಡ್ಡಿ ಬೆಂಗಳೂರು