ಕಾಂಗ್ರೆಸ್ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಸುಂದರೇಶ್ ಅವರು ಇಂದಿರಾ ಕ್ಯಾಂಟೀನ್ ಕುರಿತು ಮಾತನಾಡಿದರು . ಜನಸಾಮಾನ್ಯರು ಕಷ್ಟದಲ್ಲಿರುವಾಗ ನೆರವಾಗುವುದು ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳೇ. ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಎಂಬ ಅದ್ಬುತ ಯೋಜನೆಯಿಂದ ಜನಸಾಮಾನ್ಯರ ಹಸಿವು ನೀಗಿಸಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಎಲ್ಲಾ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಲಾಗಿತ್ತು .

ಈ ಕರೋನ ರೋಗದಿಂದ ಜನಸಾಮಾನ್ಯರ ಅವಸ್ಥೆ ಹೇಳತೀರದು. ಇಡೀ ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ಗಳಿದ್ದರೆ ಅದನ್ನು ಬಳಸಿಕೊಂಡು ಜನರ ಹಸಿವು ನೀಗಿಸಲು ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿತ್ತು. ಈ ಸಂದರ್ಭದಲ್ಲಿ ಇಂದಿರಾ ಕ್ಯಾಂಟಿನ್ ಪುನರಾರಂಭಿಸಿ ಜನರ ಹಸಿವನ್ನು ನೀಗಿಸಲು ಸೂಚಿಸಿದ ಹೈಕೋರ್ಟ್ ಗೆ ಧನ್ಯವಾದಗಳನ್ನು ತಿಳಿಸಿದರು .
ಅದಲ್ಲದೆ ಈ ತಕ್ಷಣ ಲಸಿಕೆ ಕೊರತೆಯನ್ನು ನೀಗಿಸಿ ಎಲ್ಲರಿಗೂ ಲಸಿಕೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು
ವರದಿ: ಮಂಜುನಾಥ್ ಶೆಟ್ಟಿ ಶಿವಮೊಗ್ಗ