ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಹುಟ್ಟು ಹಬ್ಬದ ಪ್ರಯುಕ್ತ AIR ವೃದ್ಧಾಶ್ರಮದಲ್ಲಿ ಊಟ ನೀಡುವ ಮೂಲಕ ಜನ್ಮ ದಿನಾಚರಣೆ ಆಚರಿಸಲಾಯಿತು. ಆ ಕಾರ್ಯಕ್ರಮದ ನಂತರ ಮೆಜೆಸ್ಟಿಕ್ ಸಿಟಿ ಮಾರ್ಕೆಟ್ ಹಾಗೂ ರಾಜಾ ಮಾರ್ಕೆಟ್ ಗಳಲ್ಲಿ ರಸ್ತೆ ಬದಿ ಮಲಗಿದ್ದ ಹಿಂದುಳಿದವರಿಗೆ ಬೆಡ್ ಶೀಟ್ ನೀಡಲಾಯಿತು.

ಇದೊಂದು ಹೊಸ ಅನುಭವ ತಂದಿದೆ. ರಾತ್ರಿಯ ಹೊತ್ತು ಚಳಿ ಮಳೆಯಲ್ಲಿಯೇ ಮಲಗುವ ಜನರನ್ನ ಕಂಡು ಅವರ ಜೊತೆ ಸ್ವಲ್ಪ ಹೊತ್ತು ಮಾತನಾಡಿದ್ದು ವಿಶೇಷ ಅನುಭವ ನೀಡಿದೆ. ಅವರಿಗೆ ನೀಡಲಾದ ಬೆಡ್ ಶೀಟ್, ಸ್ಯಾನಿಟೈಶರ್ ಗಳನ್ನ ಪಡೆದು ದೇವರು ನಿಮ್ಮನ್ನ ಚನ್ನಾಗಿ ಇಟ್ಟಿರಲಿ ಎಂದು ಆರ್ಶಿವಾದ ನೀಡಿದರು.ಎಂಥಾ ಅಧ್ಬುತ ಅನುಭವ. ನನ್ನ ಹುಟ್ಟುಹಬ್ಬ ನಿಜಕ್ಕೂ ಸಾರ್ಥಕ ತಂದಿತ್ತು.

ಆತ್ಮೀಯರು, ಹಿತೈಷಿಗಳು ನನಗೆ ಶುಭ ಕೋರಲು ಮುಂದಾಗಿದ್ದಾರೆ. ದಯವಿಟ್ಟು ಆ ಬಂಧುಗಳಿಗೆ ಈ ಮೂಲಕ ಮನವಿ ಕೇಕ್ ಪುಪ್ಷಗುಚ್ಚ ಹೀಗೆ ಹಣ ಖರ್ಚು ಮಾಡುವ ಬದಲು, ಅದೇ ಹಣದಲ್ಲಿ ಬಡವರಿಗೆ ಕೈಲಾದ ಸಹಾಯವನ್ನ ಮಾಡಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾದ ದೊಮ್ಮಲೂರು ಶೇಖರ್ ಮತ್ತು ರಾಘವೇಂದ್ರ ಶೆಟ್ಟಿ ಅವರ ಪತ್ನಿ ಶ್ರೀಮತಿ ಶುಭಶ್ರೀ ಶೆಟ್ಟಿ ಹಾಗೂ ಮಗನಾದ ಅಸ್ತಿಕ್ ಆರ್ ಶೆಟ್ಟಿ ಅಭಿಮಾನಿ ಸಂಘದ ಅಧ್ಯಕ್ಷರಾದ ಹುಳಿಮಾವು ಮಂಜು ಹಿತೈಷಿಗಳು ಬಂಧುಗಳು ಉಪಸ್ಥಿತರಿದ್ದರು.

ಡಾ. ಬೇಳೂರು ರಾಘವೇಂದ್ರ ಶೆಟ್ಟಿ
ಅಧ್ಯಕ್ಷರು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ. ಕರ್ನಾಟಕ…