ಎಂದಿನಂತೆ ಇಂದು ಕೂಡ ಹಲವು ಸಂಘಟನೆಗಳು ನಿರಾಶ್ರಿತರಿಗೆ ಆಹಾರವನ್ನು ಒದಗಿಸಿದವು. ವಿಶ್ವ ಹಿಂದೂ ಪರಿಷತ್ , ಬಜರಂಗದಳ , ಸೇವಾ ಭಾರತಿ ಕರ್ನಾಟಕ ಕೋವಿಡ ಸುರಕ್ಷಾ ಪಡೆ ಸಂಯುಕ್ತಾಶ್ರಯದಲ್ಲಿ ಮೆಗಾನ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಆಶ್ರಯ ಟೆಂಟ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪರವೂರಿನಿಂದ ಬಂದಿರುವ ರೋಗಿಗಳ ಸಂಬಂಧಿಗಳಿಗೆ ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ . ಅಲ್ಲದೆ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಡಾಕ್ಟರ್ ರಾಜಶ್ ರವರು ಎಲ್ಲ ಸಂಘಟನೆ ಪರವಾಗಿ ಮಾತನಾಡಿದರು .

ಇಷ್ಟೇ ಅಲ್ಲದೆ ಎಲ್ಲ ಸಂಘಟನೆಗಳು ಸೇರಿ ನಗರದ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನದ ಊಟವನ್ನು ವಿತರಿಸಿದರು
ಈ ಸಂದರ್ಭದಲ್ಲಿ ರಾಜೇಶ್ ಗೌಡ, ಸುರೇಶ್ ಬಾಬು, ಮಂಜು ಶೇಟ್, ಪ್ರಶಾಂತ್, ಗಂಗಾಧರ್, ಪೃಥ್ವಿಗೌಡ, ಅಮಿತ್, ಮೋಹನ್, ಪ್ರೇಮ್, ವಿವೇಕ್, ಪವನ್, ಯಶ್ವಂತ್, ಮಂಜುನಾಥ್ ವಿಕಾಸ್ಉಪಸ್ಥಿತರಿದ್ದರು.