ದಿನಾಂಕ 18-12-2021 ರಂದು ಮಧ್ಯಾಹ್ನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಸ್ಟೇಷನ್ ವೆಹಿಕಲ್ ಪಾರ್ಕಿಂಗ್ ನ ಹತ್ತಿರದ ಖಾಲಿ ಜಾಗದಲ್ಲಿ 04 ಜನ ವ್ಯಕ್ತಿಗಳು ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ಜಯನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ.

ಆರೋಪಿಗಳಾದ 1)ನವೀನ್, 28 ವರ್ಷ, ಹೊಸಮನೆ, ಶಿವಮೊಗ್ಗ, 2) ಪ್ರದೀಪ 25 ವರ್ಷ ಶಿಕಾರಿಪುರ ಟೌನ್, 3)ಗಿರೀಶ 29 ವರ್ಷ ಹಳಿಯೂರು ಹೊಸಕೇರಿ ಶಿಕಾರಿಪುರ, 4) ಬಸವರಾಜಪ್ಪ, 48 ವರ್ಷ, ಇಂಡಳ್ಳಿ, ಸೊರಬರವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 38,000/- ರೂ ಗಳ ಒಟ್ಟು 1 ಕೆಜಿ 59 ಗ್ರಾಂ ತೂಕದ ಒಣ ಗಾಂಜಾ, 5 ಮೊಬೈಲ್ ಫೋನ್, 500 ರೂ ನಗದು ಮತ್ತು ಕೃತ್ಯಕ್ಕೆ ಬಳಸಿದ 2 ದ್ವಿ ಚಕ್ರ ವಾಹನಗನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಗುನ್ನೆ ಸಂಖ್ಯೆ 0095/2021 ಕಲಂ 8(c), 20(b)NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…