ಶಿವಮೊಗ್ಗ: ಬೆಳ್ಳಂಬೆಳಗ್ಗೆ ಬಾಡಿಗೆ ಕೇಳುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರವನ್ನ ಕಿತ್ತುಕೊಂಡು ಹೋದ ಘಟನೆ ಇಂದು ಜೈಲ್ ವೃತ್ತದಲ್ಲಿ ನಡೆದಿದೆ. ಆಟೋದಲ್ಲಿ ಬಂದ ಮೂವರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.ಹೊನ್ನವಿಲೆಯಿಂದ ಬಂದ ಸುನೀತಾ(54) ವರ್ಷದ ಮಹಿಳೆ ಉಸಿರಾಟ ತೊಂದರೆಗೆ ಒಳಗಾಗಿದ್ದು, ದುರ್ಗಿಗುಡಿಯ ಶನಿಮಹಾತ್ಮ ದೇವಸ್ಥಾನದ ಬಳಿಯಿರುವ ಖಾಸಗಿ ಕ್ಲಿನಿಕ್ ನ ಟೋಕನ್ ಪಡೆಯಲು ಬಂದಿದ್ದಾರೆ.ಕಾರಿನಲ್ಲಿ ಜೈಲ್ ವೃತ್ತದ ಬಳಿ 12 ವರ್ಷದ ಮೊಮ್ಮಗನೊಂದಿಗೆ ಮಹಿಳೆ ಇಳಿದಿದ್ದಾರೆ.

ಅಷ್ಟು ಹೊತ್ತಿಗೆ ಆಟೋ ಚಾಲಕನೊಬ್ಬ ಎಲ್ಲಿಗೆ ಬಿಡಬೇಕು ಎಂದು ಕೇಳಿದ್ದಾನೆ. ಇಲ್ಲೆ ಹತ್ತಿರವಿದೆ ಕ್ಲಿನಿಕ್ ನಾನು ಒಬ್ಬಳೆ ಆಟೋ ಹತ್ತಲ್ಲವೆಂದಿದ್ದಾರೆ ಆ ಮಹಿಳೆ.ಸ್ವಲ್ಪ ದೂರ ಚಲಾಯಿಸಿಕೊಂಡು ಮತ್ತೆ ತಿರುಗಿ ಬಂದ ಆಟೋ ಚಾಲಕ ಮಹಿಳೆಯ ಕುತ್ತಿಗೆಗೆ ಕೈಹಾಕಿದ್ದಾನೆ. ಮಾಂಗಲ್ಯ ಸರದಲ್ಲಿ 20 ಗ್ರಾಂ ಕಟ್ ಆಗಿ ದುರುಳನ ಕೈ ಸೇರಿದೆ. 80 ಸಾವಿರ ರೂ. ಹಣವೆಂದು ಅಂದಾಜಿಸಲಾಗಿದೆ. ಈ ಘಟನೆ ಇಂದು ಬೆಳಗಿನ ಜಾವ 4 ಗಂಟೆಗೆ ನಡೆದಿದ್ದು, ಜಯನಗರ ಪೊಲೀಸರು ಪರಿಶಿಲನೆ ನಡೆಸಿ ಸರಗಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…