ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಅಧ್ಯಕ್ಷರಾದ ಎಚ್ ಎಸ್ ಸುಂದರೇಶ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗಳಿಗೆ 1ದಿನಕ್ಕೆ 1ಕೋಟಿ ವ್ಯಾಕ್ಸಿನೇಷನ್ ಹಾಗೂ ಭಾರತೀಯರೆಲ್ಲರಿಗೂ ವ್ಯಾಕ್ಸಿನೇಷನ್ ಕೊಡಬೇಕು ಎಂದು ಮನವಿ ಮಾಡಿದರು. ಕೇಂದ್ರ ಸರ್ಕಾರವು ವ್ಯಾಕ್ಸಿನೇಷನ್ ಕೊಡುವುದರಲ್ಲಿ ಎಡವಿದೆ. ಕೇಂದ್ರ ಸರ್ಕಾರವು 6.63 ಕೋಟಿ ವ್ಯಾಕ್ಸಿನೇಷನ್ ಅನ್ನು ಬೇರೆ ದೇಶಗಳಿಗೆ ನೀಡಿದೆ. ಸರ್ಕಾರವು ಭಾರತೀಯರಿಗೆ ಆದ್ಯತೆ ನೀಡಬೇಕಿತ್ತು ಅದನ್ನು ಬಿಟ್ಟು ಬೇರೆ ದೇಶಗಳಿಗೆ ಕಳಿಸುವ ಅವಶ್ಯಕತೆ ಏನಿತ್ತು . ಇದು ಸೂಕ್ಷ್ಮವಾಗಿ ಸರ್ಕಾರದ ಜನರ ನೋವಿನಲ್ಲಿ ಹಣ ಗಳಿಸುವ ವಿಧಾನ ಎಂದು ಆರೋಪಿಸಿದರು. ಈ ತಕ್ಷಣವೇ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಲಸಿಕೆಗಳನ್ನು ಸಮರ್ಪಕವಾಗಿ ಸರಬರಾಜು ಮಾಡಬೇಕು ಎಂದು ಸುಂದರೇಶ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ