4/6/21 ಅಂಬೇಡ್ಕರ್ ಭವನ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಇರುವ ಬೀದಿ ಬದಿ ಗುರುತಿನ ಚೀಟಿ ಪಡೆದ ವ್ಯಾಪಾರಿಗಳಿಗೆ 45 ವರ್ಷ ಮೇಲ್ಪಟ್ಟರವರಿಗೆ ಅಲ್ಲದೆ ಈಗ 18 ವರ್ಷ ಮೇಲ್ಪಟ್ಟ ವರಿಗೂ ಉಚಿತ ಕೊವೀಡ್ ಶಿಲ್ಡ್ ಲಸಿಕೆ ಹಾಕಲಾಗುತ್ತದೆ.ಪಾಲಿಕೆ ಯಿಂದ ಕರೆ ಬರುವುದು ಅವರು ಬಂದು ಹೇಳಿದ ದಿನಾಂಕ ಮತ್ತು ಸ್ಥಳದಲ್ಲಿ ಲಸಿಕೆ ಪಡೆಯಬಹುದು. ಎರಡನೇ ಹಂತದ ಲಸಿಕೆಯನ್ನು ದಿ: 4/6/21 ರಿಂದ 9/6/21ರ ವರೆಗೆ ನೀಡಲಾಗುವುದು.ಬೆಳಿಗ್ಗೆ 8 ರಿಂದ ಸಂಜೆ 4ರ ವರೆಗೆ ಪಾಲಿಕೆ ಯಿಂದ ಪೋನ್ ಬಂದ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಲಸಿಕೆ ನೀಡಲಾಗುವುದು. ಪೋನ್ ಮಾಡಿದಾಗ ಮೊದಲೇ ಲಸಿಕೆ ಪಡದಿದ್ದರೆ ಮಾಹಿತಿ ನೀಡುವುದು.ಬರುವಾಗ ಆಧಾರ ಕಾರ್ಡ್ ಮತ್ತು ಬೀದಿ ಬದಿ ಗುರುತಿನ ಚೀಟಿ ತರುವುದು ಅಂತರ ಕಾಪಾಡುವುದರ ಜತೆ ಮಾಸ್ಕ್ ಧರಿಸುವುದು ಕಡ್ಡಾಯ.

ತಪ್ಪದೇ ಲಸಿಕೆ ಪಡೆದುಕೊಳ್ಳಿ ಕೊರೊನಾ ಎಂಬ ಭಯವು ಎಲ್ಲರೂ ಸೇರಿ ಮುಕ್ತ ಮಾಡೋಣ…

ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು ಪಾಲಿಕೆ ಅಧಿಕಾರಿ CAOರಾದ ಶ್ರೀಮತಿ ಅನುಪಮಾ ರವರು, COಗಳಾದ ಶ್ರೀ ರತ್ನಾಕರ್ ಶ್ರೀ ಮತಿ ಗೀತಾ ಶ್ರೀ ಮತಿ ರೇಣುಕಾ ಹಾಗೂ ಪಾಲಿಕೆ ಸಿಬ್ಬಂದಿ ವರ್ಗದವರು, ಆರೋಗ್ಯ ಅಧಿಕಾರಿಗಳು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ.