ಶಿವಮೊಗ್ಗದ ಗ್ರಾಮಾಂತರ ಭಾಗಗಳಲ್ಲಿ ವಾಲ್ಮೀಕಿ ನಾಯಕ ಯುವ ಪಡೆ ಹಾಗೂ ಆರ್ ಜೆ ಗ್ರೂಪ್ ಶಿವಮೊಗ್ಗ ಇವರ ಜಂಟಿ ಪ್ರಾಯೋಜಕತ್ವದಲ್ಲಿ ಬಡವರಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು. ಬಡವರು ಹಸಿವಿನಿಂದ ಬಳಲದೆ ಇರುವ ದಂತೆ ತಡೆಯುವುದೇ ಇದರ ಮುಖ್ಯ ಉದ್ದೇಶ. ಬಡತನ ರೇಖೆಗಿಂತ ಕೆಳಗಿರುವವರಿಗೆ ಆಹಾರಕ್ಕೆ ಕಿಟ್ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಇದು ಎಂದು ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷರಾದ ಹರೀಶ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಯುವ ಪಡೆ ಹಾಗೂ ಆರ್ ಜಿ ಗ್ರೂಪ್ ನ ಸದಸ್ಯರು ಉಪಸ್ಥಿತರಿದ್ದರು.


ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ.