ಶಿವಮೊಗ್ಗ: ಗೌಡ ಸಾರಸ್ವತ ಸಮಾಜದ ಹಿರಿಯ ಮುಖಂಡ, ವಿಜಯ ಮೋಟರ್ಸ್ ಮಾಲೀಕ ಹಾಗೂ ಬಸ್ ಮಾಲೀಕರ ಸಂಘದ ಪದಾಧಿಕಾರಿಯಾಗಿದ್ದ ಕೆ.ವಿ. ಜಯಪ್ರಕಾಶ್ ಶೆಣೈ(75) ಅನಾರೋಗ್ಯದಿಂದ ನಿನ್ನೆ ಸಂಜೆ ನಿಧನರಾಗಿದ್ದಾರೆ.ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ, ಖಾಸಗಿ ಬಸ್ ಮಾಲೀಕರ ಸಂಘ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಸಂತಾಪ:ಜಯಪ್ರಕಾಶ್ ಶೆಣೈ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್.  ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ  ಬಸ್ ಗಳ ಸೇವೆ ಒದಗಿಸುವುದರ ಮೂಲಕ ಗ್ರಾಮೀಣ ಜನರ ಓಡಾಟಕ್ಕೆ  ಅವರ ಕಾಣಿಕೆ ಅಪಾರವಾಗಿದೆ. ಗೌಡ ಸಾರಸ್ವತ ಸಮಾಜದ ಮುಖಂಡರಾಗಿ ಸಮಾಜದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಖಾಸಗಿ ಬಸ್ ಮಾಲೀಕರ ಮತ್ತು ಸಿಬ್ಬಂದಿಗಳ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಿದ್ದು.

ಹಲವು ಬಾರಿ ನಿಯೋಗದ ನೇತೃತ್ವವನ್ನು  ವಹಿಸಿಕೊಂಡು ನನ್ನನ್ನು ಭೇಟಿ ಮಾಡಿ ಖಾಸಗಿ ಬಸ್ ನವರಿಗೆ ಹಾಗೂ ಸಿಬ್ಬಂದಿಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗುತ್ತಿದ್ದರು.ಅವರ ನಿಧನದಿಂದ  ಬಸ್ ಖಾಸಗಿ ಬಸ್ ಮಾಲಿಕರ ಮತ್ತು ಸಿಬ್ಬಂದಿಗಳಿಗೆ ಹಾಗೂ ಗೌಡ ಸಾರಸ್ವತ ಸಮಾಜಕ್ಕೆ ಮತ್ತು ಅವರ ಕುಟುಂಬಕ್ಕೆ ಅಪಾರ ನಷ್ಟವುಂಟಾಗಿದೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಇವರೆಲ್ಲರಿಗೂ ನೀಡಲೆಂದು ಪ್ರಾರ್ಥಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…