ಹುಂಚ ನ್ಯೂಸ್…

ಹುಂಚ ಗ್ರಾಮ ಸಹಕಾರಿ ಸಂಘದ 2020-21 ನೇ ಸಾಲೀನ ಸರ್ವ ಸದಸ್ಯರ ಸಭೆ ನೆಡೆಸದೆ ಇರುವುದು , ಆಡಿಟ್ ಆಗದೇ ಇರುವುದರ ಬಗ್ಗೆ ಗ್ರಾಮಸ್ಥರು ಹಾಗು ಷೇರು ದಾರರು ಇಂದು ಸಹಕಾರಿ ಸಂಘದ ಡಿಸಿಸಿ ಬ್ಯಾಂಕ್ ಎ ಆರ್ ಇಂದ್ರಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳು ವಾದ ವಿವಾದ ಮಾಡಿಕೊಂಡು ಕೆಲ ಹೊತ್ತು ಗೋಂದಲ ಮೂಡಿ ಕೈ ಕೈ ಮಿಲಾಯಿಸುವ ವರೆಗೆ ಪರಿಸ್ಥಿತಿ ತಲುಪಿದಾಗ, ಆರಕ್ಷಕ ಸಿಬ್ಬಂದಿ ಬಂದು ಗ್ರಾಮಸ್ಥರಿಗೂ ಸಮಾಧಾನ ಮಾಡಿ ಪರೀಸ್ಥಿತಿ ತಿಳಿಗೋಳಿಸಿದರು.

ಮನವಿ ಸಂದರ್ಭದಲ್ಲಿ ಪ್ರೇಮ್ ಕುಮಾರ್ (ಮಾಜಿ ಅಧ್ಯಕ್ಷರು) ಸತೀಶ್ ಈರನಬೈಲ್ , ಕೇಶವ ನಾಗರಹಳ್ಳಿ, ಸುರೇಶ್, ಉಲ್ಲಾಸ್ ಭಟ್, ಗುರುರಾಜ, ಸುಣ್ಣಕಲ್ ಗುರುರಾಜ, ವಾಸಣ್ಣ ಹೋನ್ನೆಬೈಲು, ಮೂರ್ತಿ ಹೊನ್ನೆ ಬೈಲು, ಚಂದ್ರಶೇಖರ ಹೊಂಡಲಗದ್ದೆ, ಮಂಜುನಾಥ ರಿಟೈರ್ಡ್ ಪೋಲೀಸ್ , ಸಂಪತ್ ಕುಮಾರ್ , ರಾಘಣ್ಣ ಮತ್ತು ಹುಂಚಾದ ಗ್ರಾಮಸ್ಥರು ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು, ಮತ್ತು ಶೇರುದಾರರು ಉಪಸ್ಥಿತರಿದ್ದರು. ಸೋಮಶೇಖರ್ ಎಎಸ್ಐ ಹುಂಚ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…