ದಿನಾಂಕಃ-04-06-2021 ರಂದು ಸಂಜೆ ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆಹೊನ್ನೂರು ರಸ್ತೆಯ ಸ್ಮಶಾನದ ಬಳಿ ಯಾರೋ ಆಸಾಮಿಗಳು ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಸಿ.ಪಿ.ಐ ಭದ್ರಾವತಿ ನಗರ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಆರೋಪಿತರಾದ 1) ಸೈಯ್ಯದ್ ಅರ್ಬಾಜ್ @ ಮಂಡ್ಯಾ, 23 ವರ್ಷ ಮೋಮಿನ್ ಮೊಹಲ್ಲಾ ಭದ್ರಾವತಿ, 2)ಪರ್ವಿಜ್ @ ಮಾಯಾ 22 ವರ್ಷ, ನೆಹರು ನಗರ ಭದ್ರಾವತಿ ರವರನ್ನು ವಶಕ್ಕೆ ಪಡೆದು, ಸದರಿಯವರಿಂದ 02 ಕೆ.ಜಿ 100 ಗ್ರಾಂ ತೂಕದ ಗಾಂಜಾ, ರೂ 1,600/- ನಗದುಹಣ ಮತ್ತು 01 ದ್ವಿ ಚಕ್ರ ವಾಹನವನ್ನು ಸ್ವಾಧಿನ ಪಡಿಸಿಕೊಂಡು, ಆರೋಪಿತರ ವಿರುದ್ಧ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ