ಶಿವಮೊಗ್ಗ: ಎಳ್ಳಮಾವಾಸ್ಯೆ ಅಂಗವಾಗಿ ವಿಶ್ವ ಹಿಂದು ಪರಿಷತ್ ಮತತ್ಉ ಶಕ್ತಿ ದೇವತೆಗಳ ಸಮಾಗಮ ಸಮಿತಿ ಶಿವಮೊಗ್ಗ ಇವರ ವತಿಯಿಂದ ನಗರದ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ 23 ನೇ ವರ್ಷದ ಶಕ್ತಿ ದೇವತೆಗಳ ಸಮಾಗಮ ಯಶಸ್ವಿಯಾಗಿ ನಡೆಸಲಾಯಿತು.

ನಗರದ ಸುಮಾರು 40ಕ್ಕೂ ಹೆಚ್ಚು ಅಲಂಕೃತ ಶಕ್ತಿ ದೇವತೆಗಳು ಪಾಲ್ಗೊಂಡಿದ್ದು, ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು. ಭಜನೆ, ಅನ್ನಪೂಣೇಶ್ವರಿ ಆರಾಧನಾ ಕಾರ್ಯಕ್ರಮ  ಆಯೋಜನೆ ಮಾಡಲಾಗಿತ್ತು. ಸಂಜೆ ಮಡಿಲಕ್ಕಿ ಸಮರ್ಪಣೆ ಬಳಿಕ ಶಕ್ತಿ ದೇವತೆಗಳು ಸ್ವಸ್ಥಾನಗಳಿಗೆ ಮರಳಿದವು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಜೆ.ಆರ್. ವಾಸುದೇವ್, ಬಜರಂಗದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ನಾರಾಯಣ್ ಜಿ. ವರ್ಣೇಕರ್, ಡಾ. ಶ್ರೀಧರ್, ಡಾ. ಪಾಂಡೆ, ದೀನದಯಾಳ್, ಅರ್ಚಕ ರಾಮಪ್ರಸಾದ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…