ಶಾಂತವೇರಿ ಗೋಪಾಲಗೌಡ ಬಡಾವಣೆ 17ನೇ ವಾರ್ಡಿನ ಸವಿತಾ ಸಮಾಜದ ಮುಖಂಡರಾದ ಎಚ್.ಆರ್. ಮಹೇಂದ್ರ, ಎಂ. ಶ್ರೀನಿವಾಸ್, ಎಂ.ರಮೇಶ್ ,ಗೋವಿಂದರಾಜ್, ಸುದೀಪ್ ಮತ್ತು ರಾಮಣ್ಣ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಎಸ್. ಸುಂದರೇಶ್ ರವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ. ಡಿ.ಮಂಜುನಾಥ್, ಟಿ. ಡಿ. ಗಿತೇಂದ್ರಗೌಡ, ಆರ್.ರಾಜಶೇಖರ್ ,ಕಾಂಗ್ರೆಸ್ ನ ಹಿರಿಯ ಮುಖಂಡರಾದ ರಾಮೇಗೌಡ, ಆರ್. ರಾಜ್ ಕುಮಾರ್ ಇನ್ನಿತರರು ಹಾಜರಿದ್ದರು .

ವರದಿ ಮಂಜುನಾಥ್ ಶೆಟ್ಟಿ…