ಜಯ ಕರ್ನಾಟಕ ಸಂಘಟನೆಯು ದಿನಾಂಕ 06-09-2021 ರಂದು ಕರ್ನಾಟಕ ಸರ್ಕಾರಕ್ಕೆ ಪೊಲೀಸ್ ಇಲಾಖೆಯಲ್ಲಿನ ಡಿವೈಎಸ್ಪಿ ಹುದ್ದೆಯ ಮೇಲ್ಪಟ್ಟವರಿಗೆ ಮಾತ್ರವಲ್ಲದೆ ಹಗಲಿರುಳೆನ್ನದೆ ಸಾರ್ವಜನಿಕರ ರಕ್ಷಣೆಗಾಗಿ ದುಡಿಯುತ್ತಿರುವ ಕೆಳಗಿನ ಹುದ್ದೆಯ ಅಧಿಕಾರಿಗಳಿಗೆ ಇಪ್ಪತ್ತು ಲಕ್ಷ ರೂಪಾಯಿಗಳ ಗುಂಪು ವಿಮೆಯನ್ನು ಜಾರಿಗೊಳಿಸಲು ಮನವಿ ಮಾಡಿತ್ತು.


ಇದಕ್ಕೆ ಉತ್ತರವಾಗಿ ಸರ್ಕಾರವು ದಿನಾಂಕ 10-10-2021 ರಿಂದಲೇ ಯೋಜನೆಯನ್ನು ಜಾರಿಗೊಳಿಸಿ ಪತ್ರದ ಮುಖಾಂತರ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ರಿಗೆ ಮಾಹಿತಿ ನೀಡಿದೆ ಎಂದು ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿ. ಎನ್ . ಜಗದೀಶ್ ರವರು ತಿಳಿಸಿದರು. ಅಲ್ಲದೆ ಶೀಘ್ರವಾಗಿ ಜಾರಿಗೊಳಿಸಿದ್ದಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಸಂಘಟನೆಯ ಪರವಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

ವರದಿ: ಅರುಣ್ ಬೆಂಗಳೂರು