ಬೆಂಗಳೂರು : ಇಂದು ಬೆಳಕು ಫೌಂಡೆಶನ್ ಟ್ರಸ್ಟ್ ವತಿಯಿಂದ ಆಶ್ರಮದ ಕಾರ್ಯಕ್ರಮವನ್ನು ಶ್ರೀಯುತ ಡಾಕ್ಟರ್ ಅರುಣ್ ಸೋಮಣ್ಣನವರು ಉದ್ಘಾಟಿಸಿದರು. ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರು ಹಾಗೂ ಮಾಜಿ ಮಹಾಪೌರರು ಹಾಗೂ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಶಾಂತಕುಮಾರಿ ರವಿಕುಮಾರ್ ರವರು ವೇದಿಕೆಯ ಉಪಸ್ಥಿತರಿದ್ದರು.

ಉಮೇಶ್ ಶೆಟ್ಟಿ ಬಿಬಿಎಂಪಿ ಸದಸ್ಯರು ಹಾಗೂ ಸಮಾಜ ಸೇವಕರಾದ ಕನ್ನಡ ಮಂಜು , ಇತಿಹಾಸ ತಜ್ಞರು ಧರ್ಮೇಂದ್ರ ಕುಮಾರ್ ಅರೇನಹಳ್ಳಿ , ಸ್ವಯಂ ಜಾಗೃತಿ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಅಜಯ್ ಕುಮಾರ್ ಹಾಗೂ ಗೋವಿಂದರಾಜ ನಗರ ಪೊಲೀಸ್ ಠಾಣೆಯ ಯಶವಂತ್ ರವರು, ಮೊಬೈಲ್ ಅಸೋಸಿಯೇಷನ್ ಅಧ್ಯಕ್ಷರಾದ ರೇವತಿ ಶೆಟ್ಟಿಯವರು, ರಕ್ಷಣಾ ವೇದಿಕೆ ರಘುನಂದನ್ ರವರು, ಹಾಗೂ ಬೆಳಕು ಫೌಂಡೇಶನ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಅವಿನಾಶ್ ರವರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…