ಬೆಂಗಳೂರು : ಇಂದು ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿ ಗ್ರಾಮ ರಾಜ್ಯದಿಂದ ರಾಮರಾಜ್ಯದವರೆಗೆ ಎಂಬ ಧ್ಯೇಯೋದ್ದೇಶದೊಂದಿಗೆ ಆರಂಭಿಸಿರುವ ಗ್ರಾಮರಾಜ್ಯ ದ 28ನೇ ಅಧಿಕೃತ ಮಾರಾಟ ಮಳಿಗೆಯನ್ನು ಆರನೇ ಕ್ರಾಸ್ ಐದನೇ ಮುಖ್ಯರಸ್ತೆ ಮಲ್ಲೇಶ್ವರಂ ನಲ್ಲಿ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಭಾರತ ಸರ್ಕಾರದ ಹಿಂದಿ ಸಲಹಾ ಸಮಿತಿ ಸದಸ್ಯರಾದ ರಾಘವೇಂದ್ರ ಸರ್ವಂ , ಕನ್ನಡ ಚಲನಚಿತ್ರ ನಟ ಹಾಗು ನಿರ್ದೇಶಕರಾದ ಎಸ್ ನಾರಾಯಣ್ , ರೆಡಿಯೋ ಜಾಕಿ ರಾಪಿಡ್ ರಶ್ಮಿ , ಬೆಂಗಳೂರು ಹವ್ಯಕ ಮಂಡಲದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ , ರಾಮೇಶ್ವರ ಹವ್ಯಕ ವಲಯದ ಅಧ್ಯಕ್ಷರಾದ ಹೆಗ್ಡೆ ಹಾಗೂ ಗ್ರಾಮದ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…