ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಸಮಿತಿ ಪದಾಧಿಕಾರಿಗಳು ಡಾ. ಅಂಬಣ್ಣ ಡವಳಾರರಿಗೆ ಸಾಮಾಜಿಕ ನ್ಯಾಯದಡಿಯಲ್ಲಿ ಎಂಎಲ್ ಸಿ /ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿಗಳ ಅಧ್ಯಕ್ಷ / ಚೇರ್ಮನ್ ಅಥವಾ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯತ್ವ ಇತರ ರಾಜಕೀಯ ಅಧಿಕಾರ ಕೊಡುವಂತೆ ಒತ್ತಾಯ ಮಾಡಿದರು .

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿಠಲ್ ರವರು ತುಳಿತಕ್ಕೊಳಗಾದ ಜನಾಂಗ ಗಳಲ್ಲೇ ಅತಿ ಹೆಚ್ಚು ಅನ್ಯಾಯಕ್ಕೊಳಗಾಗಿದೆ ನಮ್ಮ ಕಬ್ಬಲಿಗ ಕೋಲಿ ಸಮಾಜ . ಸಮಾಜ ಬಹಳ ನೊಂದಿದೆ. ನೊಂದ ಸಮಾಜಕ್ಕೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆಯಿದೆ ಹಾಗೂ ಹೊಸ ನಾಯಕತ್ವ ಬೇಕಾಗಿದೆ . ಅವಕಾಶಗಳಿಂದ ವಂಚನೆಗೆ ಒಳಗಾದ ಮತ್ತು ಶೋಷಿತ ಜನಾಂಗಗಳ ಹಾಗೂ ಸಮಾಜದ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯ ಡಾ. ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಖಾನಾಪುರ ಗ್ರಾಮದ ಡಾ. ಅಂಬಣ್ಣ ಡವಳಾರಿಗೆ ಇದೆ ಎಂದು ತಿಳಿಸಿದರು.

ಜಾಹೀರಾತು…