ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹಚ್ಚೇಗೌಡ ಶಿವಣ್ಣ ರವರು ಬೆಂಗಳೂರಿನ ಯಶವಂತಪುರ ಹೋಬಳಿ ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂಬರ್ 15 ರಲ್ಲಿ ಮೂವತ್ತೆಂಟು ಎಕರೆ ಹದಿನೈದು ಗುಂಟೆ ಜಾಗವನ್ನು ಕೆಂಚಪ್ಪ ಗೌಡ ಮುಂತಾದವರು ಸೇರಿ ಕಬಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸದರಿ ಜಾಗವನ್ನು ದಿವಂಗತ ಕ್ರಿಷ್ಣಪ್ಪನೋರ ಧರ್ಮಪತಿ ಗಂಗಮ್ಮ ಮತ್ತು ಪುಟ್ಟಸ್ವಾಮಿ ಅವರ ಮನವಿಯಂತೆ ದಿವಂಗತ ರಂಗಪ್ಪ ಮತ್ತು ಶ್ರೀ ಕೃಷ್ಣಪ್ಪ ಶಿಕ್ಷಣ ಪ್ರಸ್ತಾಪಿಸಲು ಒಕ್ಕಲಿಗ ಸಮಿತಿಯು ಸರಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಹಿಂದಿನ ಕೆಂಚಪ್ಪ ಗೌಡ ಹಾಗೂ ಅವರ ಕಾರ್ಯಕಾರಿ ಸಮಿತಿಯು ಕೋಟ್ಯಂತರ ಬೆಲೆ ಬಾಳುವ ಜಮೀನನ್ನು ಕಬಳಿಕೆ ಮಾಡಿದ್ದಾರೆ ಇದೀಗ ಅವರೇ ಮತ್ತೆ ಕಾರ್ಯಕಾರಿ ಸ್ಪರ್ಧೆಗೆ ಸ್ಪರ್ಧಿಸಿರುತ್ತಾರೆ. ಹಾಗಾಗಿ ಮತದಾರರು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದರು.

ವರದಿ : ಮಂಜುಳಾ ರೆಡ್ಡಿ ಬೆಂಗಳೂರು…