ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಹಲವು ಬ್ರಾಹ್ಮಣ ಸಂಘಗಳನ್ನು ಒಳಗೊಂಡ ಮಹಾ ಒಕ್ಕೂಟದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಶ್ರೀ ಎಸ್ ರಘುನಾಥ್ ಅವರಿಗೆ ಬೆಂಬಲವನ್ನು ಘೋಷಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನದ ಚುನಾವಣೆ ಡಿಸೆಂಬರ್ ಹನ್ನೆರಡು ರಂದು ನಡೆಯಲಿದ್ದು ಮಹಾ ಒಕ್ಕೂಟದ ವತಿಯಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶ್ರೀ ರಘುನಾಥ್ ಅವರಿಗೆ ಬೆಂಬಲವನ್ನು ಸೂಚಿಸಿವೆ. ಸುಮಾರು ನಲವತ್ತೇಳು ವರ್ಷದ ಅಸ್ತಿತ್ವದಲ್ಲಿರುವ ಮಹಾಸಂಘವು ಬೆಂಗಳೂರಿಗಷ್ಟೇ ಕೇಂದ್ರೀಕೃತವಾಗಿದೆ ಬೆಂಗಳೂರು ಅದರಲ್ಲೂ ಬಸವನಗುಡಿಯ ಬಿಟ್ಟು ಹೊರ ಹೋಗಿಲ್ಲ.

ಹೀಗಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ವಿವಿಧ ಬ್ರಾಹ್ಮಣ ಉಪ ಪಂಗಡಗಳ ಕಷ್ಟಗಳನ್ನು ಕೇಳುವವರೇ ಇಲ್ಲವಾಗಿದೆ ಆದ್ದರಿಂದ ಉಪಪಂಗಡಗಳ ಮಹಾ ಒಕ್ಕೂಟವು ಎಸ್ ರಘುನಾಥ್ ಅವರ ಮೇಲೆ ವಿಶ್ವಾಸ ವಿಟ್ಟು ಅವರಿಗೆ ಬೆಂಬಲ ಸೂಚಿಸಿವೆ . ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ವತ್ಸಲಾ ನಾಗೇಶ್ , ಶ್ರೀ ಸುಧಾಕರ ಬಾಬು ,ಶ್ರೀ ಸುದರ್ಶನ , ಶ್ರೀನಾಗೇಶ್ ಮುಂತಾದವರು ಉಪಸ್ಥಿತರಿದ್ದರು

ವರದಿ : ಮಂಜುಳಾ ರೆಡ್ಡಿ ಬೆಂಗಳೂರು…